Follow Us On

WhatsApp Group
Important
Trending

ರೈಲಿಗೆ ಸಿಲುಕಿ ಅವಿವಾಹಿತ ಸಾವು: ರೈಲ್ವೆ ಹಳಿ ದಾಟುತ್ತಿದ್ದ ವೇಳೆ ದುರಂತ?

ಅಂಕೋಲಾ: ಚಲಿಸುತ್ತಿರುವ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತ ಪಟ್ಟ ಘಟನೆ ತಾಲೂಕಿನ ಹೊಸಗದ್ದೆಯಲ್ಲಿ ಸಂಭವಿಸಿದೆ. ಹೊಸಗದ್ದೆ ನಿವಾಸಿ  ರವಿ ರಾಮಚಂದ್ರ ನಾಯಕ (48) ಮೃತ ದುರ್ದೈವಿಯಾಗಿದ್ದು ,ಈತ ಟಾಟಾ ಎಸ್ ಪಿಕಪ್ ವಾಹನ ಇದ್ದುಕೊಂಡು ಬಾಡಿಗೆಗೆ ಓಡಿಸಿಕೊಂಡು ಜೀವನ ನಿಭಾಯಿಸುತ್ತಿದ್ದ. 

ಅವಿವಾಹಿತನಾಗಿದ್ದ ಈತ ಕಳೆದ ಕೆಲ ವರ್ಷಗಳಿಂದೀಚೆಗೆ ಹೊಸಗದ್ದೆಯಲ್ಲಿ ಪ್ರತ್ಯೇಕ ಮನೆ ಮಾಡಿ ಒಬ್ಬನೇ ವಾಸವಾಗಿದ್ದ, ಈತ ತನ್ನ ಮನೆಯ ಹತ್ತಿರದ ಕಾಲು ದಾರಿ ಮೂಲಕ  ಕೊಂಕಣ ರೈಲ್ವೆ ಹಳಿಯ ಮೇಲೆ ಹೋದವನು (ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ) ಯಾವುದೋ ರೈಲು ಬಡಿದು ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ರವಿ ನಾಯಕ ತನ್ನ ಸರಳ ವ್ಯಕ್ತಿತ್ತದೊಂದಿಗೆ ಹಲವರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ  ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button