Follow Us On

WhatsApp Group
Important
Trending

ಕರ್ತವ್ಯಕ್ಕೆ ಹೋಗುತ್ತೇನೆಂದು ಹೇಳಿ ಹೋದ ವೈದ್ಯ ಕಾಣೆ: ಚರ್ಮರೋಗ ತಜ್ಞನ ಪತ್ನಿ ದಾಖಲಿಸಿದ ದೂರಿನಲ್ಲಿ ಏನಿದೆ?

ಭಟ್ಕಳ:  ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದ ವೈದ್ಯರೊಬ್ಬರು ಮರಳಿ ಮನೆಗೂ ಬರದೆ ನಾಪತ್ತೆಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ನಾಪತ್ತೆಯಾದ ವೈದ್ಯ ಎಚ್.ಟಿ ಉಮೇಶ ಎಂದು ತಿಳಿದುಬಂದಿದ್ದು, ಇವರು  ತಾಲೂಕಿನ ಡಿ.ಪಿ ಕಾಲೊನಿಯಲ್ಲಿ ವಾಸವಿದ್ದರು.

ಇವರು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ  ಚರ್ಮರೋಗ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅ.10 ರ ಬೆಳ್ಳಿಗ್ಗೆ ತನ್ನ ಮನೆಯಿಂದ ಕರ್ತವ್ಯಕ್ಕೆ ಹೋಗುತ್ತೇನೆ ಎಂದು ಹೇಳ ಕರ್ತವ್ಯದಿಂದ ಮರಳ ಮನೆಗೆ ಬಾರದೆ ಸಂಬಂಧಿಕರ ಮನೆಗೂ ಹೋಗದೆ ಎಲ್ಲಯೋ ಹೋಗಿ ಕಾಣೆಯಾಗಿದ್ದಾರೆ. ಈ ಕುರಿತು ಗ್ರಾಮೀಣ ನಗರ ಠಾಣೆಯಲ್ಲಿ ವೈದ್ಯರ ಪತ್ನಿ ಪ್ರಕರಣ ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button