
ಅಂಕೋಲಾ : ಉಡುಪಿಯ ಯಕ್ಷಗಾನ ಕಲಾರಂಗದ ಪ್ರಶಸ್ತಿಗೆ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ,ನಾಡಿನ ಹೆಸರಾಂತ ವಿದ್ವಾಂಸರಾದ, ಡಾ ಜಿ ಎಲ್ ಹೆಗಡೆಯವರು ಭಾಜನರಾಗಿರುವುದಕ್ಕೆ ಅಂಕೋಲಾದ ಯುಕ್ತಮುಖಿ ಸಂಘಟನೆ ತನ್ನ ಸಂತಸ ವ್ಯಕ್ತಪಡಿಸಿದೆ. ಯಕ್ಷಮುಖಿಯ ಸಂಚಾಲಕರಾದ ರಾಜೇಶ ನಾಯಕ ಸೂರ್ವೆಯವರು, ಜಿ. ಎಲ್ ಹೆಗಡೆಯವರ ಯಶೋಗಾಥೆ ತಿಳಿಸುತ್ತಾ, “ಯಕ್ಷಗಾನದ ಹವ್ಯಾಸಿ ಕಲಾವಿದರಾಗಿ, ತಾಳಮದ್ದಲೆಯ ಪ್ರಬುದ್ಧ ಅರ್ಥದಾರಿಗಳಾಗಿ, ಸಂಶೋಧಕರಾಗಿ, ಲೇಖಕರಾಗಿ, ರಂಗಕರ್ಮಿಯಾಗಿ ಡಾಕ್ಟರ್ ಜಿ. ಎಲ್. ಹೆಗಡೆಯವರು ಸಲ್ಲಿಸಿದ ಅನನ್ಯ ಸೇವೆಯನ್ನು ಪ್ರಶಸ್ತಿಗೆ ಪರಿಗಣಿಸಿ, ಕಲಾರಂಗವು ತನ್ನ ಘನತೆಯನ್ನು ಎತ್ತರಿಸಿಕೊಂಡಂತಾಗಿದೆ ಎಂದಿದ್ದಾರೆ.
ಯಕ್ಷಮುಖಿಯ ಗೌರವ ಸಲಹೆಗಾರರಾದ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರು ಜಿ.ಎಲ್. ಹೆಗಡೆಯವರಿಗೆ ಉಡುಪಿಯ ಕಲಾವರಂಗದ ಪ್ರಶಸ್ತಿಯು ಪ್ರಾಪ್ತಿಸಿರುವುದು ಇಡೀ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ. ಯಕ್ಷಮುಖಿ ತಂಡದ ಸದಸ್ಯರಾಗಿರುವ ಹೆಸರಾಂತ ನ್ಯಾಯವಾದಿ ನಾಗರಾಜ ನಾಯಕ, ಕಲಾವಿದರಾದ ಸುಜನ ಅಗಸೂರ ಹಾಗೂ ಪನ್ನಗ ಬಾವಿಕೇರಿ – ಮೊದಲಾದವರು ಡಾ ಜಿ.ಎಲ್. ಹೆಗಡೆಯವರಿಗೆ ಪ್ರಶಸ್ತಿಯು ಲಭಿಸಿರುವ ಕುರಿತು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ