
ಹೊನ್ನಾವರ: ಪಟ್ಟಣದ ನಿವಾಸಿ ಕರೆಂಟ್ ಶಾಕ್ ತಗುಲಿ ಮೃತಪಟ್ಟಿರುವ ಘಟನೆ ನಡೆದಿದೆ. ಪಟ್ಟಣದ ದುರ್ಗಾಕೇರಿಯ ನಿವಾಸಿಯಾದ ನಾಗರತ್ನ ಮಂಜುನಾಥ ಶೇಟ್ ಅವರಿಗೆ ಕರೆಂಟ್ ಶಾಕ್ ತಗುಲಿ ಮೃತಪಟ್ಟ ದುರ್ದೈವಿ. ವಾಸವಿರುವ ಪಟ್ಟಣದ ದುರ್ಗಾಕೇರಿಯಲ್ಲಿ ಮನೆಯ ಹಿಂದಿನ ಬಾವಿಯ ಪಂಪಸೆಟನ್ನು ಚಾಲು ಮಾಡಿ ನಂತರ ಬಟ್ಟೆ ಬರೆಗಳನ್ನು ಓಗೆದು, ಪಾತ್ರೆಯನ್ನು ತೊಳೆಯಲೆಂದು ನಡೆದುಕೊಂಡು ಹೋಗುತ್ತಿದ್ದಾಗ ಕಾಲುಜಾರಿ ಬಿದ್ದಿದ್ದಾಳೆ.
ಈ ವೇಳೆ ವಿದ್ಯುತ ಸ್ಪರ್ಶವಾಗಿ ನೆಲಕ್ಕೆ ಬಿದ್ದು ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಚಿಕಿತ್ಸೆಗಾಗಿ ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ