Follow Us On

WhatsApp Group
Big News
Trending

ಯುವ ಸೈನಿಕನಿಗೆ ಭಾವಪೂರ್ಣ ವಿದಾಯ: ಸಂದೀಪ್ ನಾಯ್ಕ ಅಮರ್ ರಹೇ ಘೋಷಣೆ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಸಾವಿರಕ್ಕೂ ಹೆಚ್ಚು ಜನರು, ವೀರಯೋಧನ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದರು. ಈ ವೇಳೆ ಮನೆಯವರು, ರೋಧಿಸುತ್ತಿರುವ ದೃಶ್ಯ ಮಲಕುಲುಕುವಂತಿತ್ತು. ಇಡೀ ಊರಲ್ಲಿ ಸ್ಮಶಾನ ಮೌನ ಆವರಿಸಿತ್ತು.

ಸಿದ್ದಾಪುರ: ತಮ್ಮೂರಿನ ವೀರ ಪುತ್ರನನ್ನು ಕಳೆದುಕೊಂಡ ಗ್ರಾಮಸ್ಥರ ಕಣ್ಣಂಚಲ್ಲಿ ನೀರು. ಮನೆಯವರು, ಕುಟುಂಬದವರಂತೂ ಬಿಕ್ಕಳಿಸಿ ಅಳುತ್ತಿದ್ದರು. ಇಡೀ ಊರಲ್ಲಿ ಸ್ಮಶಾನ ಮೌನ ಆವರಿಸಿತ್ತು. ವೀರ ಯೋಧನ ಪಾಥರ್ೀವ ಶರೀರ ನೋಡಿದ ಪ್ರತಿಯೊಬ್ಬರು ಕಂಬನಿ ಮಿಡಿಯುತ್ತಿರುವ, ದುಖದಿಂದ ಪರಿತಪಿಸುತ್ತಿರುವ ದೃಶ್ಯಕಂಡುಬಂತು. ತಮ್ಮೂರಿನ ವೀರ ಪುತ್ರನನ್ನು ನೋಡಲು ಜನಸಾಗರವೇ ಹರಿದುಬಂದಿತ್ತು.

ಈ ವೇಳೆ ಸುಮಾರು ಎರಡು ಕೀಲೋಮೀಟರ್ ಅವರಿಗೆ ಮೆರಣಿಗೆ ನಡೆಸಲಾಗಿದ್ದು, ಸಾವಿರಾರು ಜನರು, ಸಂದೀಪ್ ನಾಯ್ಕ ಅಮರ್ ರಹೇ ಎಂದು ಘೋಷಣೆ ಕೂಗಿದರು. ಸಾವಿರಕ್ಕೂ ಹೆಚ್ಚು ಜನರು, ವೀರಯೋಧನ ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದರು. ಈ ವೇಳೆ ಮನೆಯವರು, ರೋಧಿಸುತ್ತಿರುವ ದೃಶ್ಯ ಮಲಕುಲುಕುವಂತಿತ್ತು.

ಹೌದು, ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ವ್ಯಾಪ್ತಿಯ ಹಂಗಾರ ಖಂಡದ ಸಂದೀಪ ನಾಯ್ಕ ಇಹಲೋಕ ತ್ಯಜಿಸಿದ್ದರು. ಹೌದು, ಯೋಧ ಸಂದೀಪ ನಾರಾಯಣ ನಾಯ್ಕ ಹೃದಯಾಘಾತದಿಂದ ರಾಂಚಿಯಲ್ಲಿ ಸಾವು ಕಂಡಿದ್ದರು. ಸಂದೀಪ ನಾರಾಯಣ ನಾಯ್ಕ 2011 ರಲ್ಲಿ ಭಾರತೀಯ ಸೇನೆಗೆ ಸೇರಿದ್ದು, ಕಳೆದ 11 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ 203 ಕೋಬ್ರಾ ಬಟಾಲಿಯನ್ ಹಜಾರಿಬಾಗ್‌ನ ಬಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೂರ್ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂದೀಪ ನಾಯ್ಕ ಅವರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಇವರ ಪಾರ್ಥಿವ ಶರೀರ ಗೋವಾಕ್ಕೆ ಬಂದು ಅಲ್ಲಿಂದ ಸಿದ್ದಾಪುರಕ್ಕೆ ಬಂದಿತ್ತು. ಸೇನೆಯ ಕಮಾಂಡರ್‌ಗಳು ಮಿಲಿಟರಿ ವಾಹನದಲ್ಲಿ ಪಾರ್ಥೀವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಸರ್ಕಾರಿ ಗೌರವ ಸಲ್ಲಿಸಿದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button