Follow Us On

WhatsApp Group
Important
Trending

ಆಟೋದಲ್ಲಿ ಬಿಟ್ಟು ಹೋದ ಚಿನ್ನಾಭರಣವನ್ನು ಮರಳಿ ಮಹಿಳೆಗೆ ಹಿಂತಿರುಗಿಸಿದ ಆಟೋ ಚಾಲಕ: ಈತನನ್ನು ಅಭಿನಂದಿಸಿ

ಭಟ್ಕಳ: ಆಟೋದಲ್ಲಿ ಬಿಟ್ಟು ಹೋದ 80 ಸಾವಿರದಷ್ಟು ಬೆಲೆಬಾಳುವ ಬಂಗಾರವನ್ನು ಮರಳಿ ಸಂಬಂಧ ಪಟ್ಟವರಿಗೆ ಮುಟ್ಟಿಸಿ ಆಟೋ ಚಾಲಕನೊರ್ವ ಮಾನವೀಯತೆ ಮೆರೆದ ಘಟನೆ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ.

ಶಿರಾಲಿ ಆಟೋ ಚಾಲಕ ಮಾದೇವ ಮುನ್ನಾ ನಾಯ್ಕ, ಎಂಬಾತ ತನ್ನ ಆಟೋದಲ್ಲಿ ಮಲ್ಲಾರಿಯ ಮಹಿಳೆಯೋರ್ವಳನ್ನು ಶಿರಾಲಿಯ ಹಾದಿಮಾಸ್ತಿ ದೇವಸ್ಥಾನದಿಂದ ಕರೆದುಕೊಂಡು ಮಾವಿನಕಟ್ಟೆಯಲ್ಲಿ ಬಿಟ್ಟು ಪುನಃ ಬರುವ ವೇಳೆ ಆಟೋದಲ್ಲಿ ಬ್ಯಾಗ್ ಇರೋದನ್ನು ಗಮನಿಸಿದ್ದಾನೆ. ಈ ವೇಳೆ ಆಟೋ ಚಾಲಕ ಬ್ಯಾಗ್ ತೆರದು ನೋಡಿದಾಗ ನಗದು ಮತ್ತು ಚಿನ್ನ ಇದ್ದು, ಇವೆರಡರ ಮೌಲ್ಯ ಸುಮಾರು 80 ಸಾವಿರ ಎನ್ನಲಾಗಿದೆ.

ನಂತರ ಆಟೋ ಚಾಲಕ ಮಹಿಳೆಯನ್ನು
ಶಿರಾಲಿ ಆಟೋ ನಿಲ್ದಾಣಕ್ಕೆ ಕರೆಸಿ ಚಿನ್ನ ನಗದು ಇದ್ದ ಬ್ಯಾಗ್ ಪುನಃ ಮರಳಿ ನೀಡಿದ್ದಾರೆ. ಈತನ ಈ ಕಾರ್ಯಕ್ಕೆ ಆಟೋ ಚಾಲಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪ್ರಿಯ ಓದುಗರೆ, ಮಾನವೀಯತೆ ಮೆರೆದ‌ ಈ ಹೃದಯವಂತ ಗುಣವಂತ ಆಟೋ ಚಾಲಕನನ್ನು ಅಭಿನಂದಿಸಲು ಮರೆಯದಿರಿ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ‌ ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button