ಬಚ್ಚಲು ಮನೆಯಲ್ಲಿ ಅಡಗಿ ಕುಳಿತಿತ್ತು ಬೃಹತ್ ಕಾಳಿಂಗ ಸರ್ಪ: ಯಶಸ್ವಿ ಕಾರ್ಯಾಚರಣೆ

ಯಲ್ಲಾಪುರ: ಬಚ್ಚಲು ಮನೆಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಅಡಗಿ ಕುಳತಿತ್ತು. ಇದನ್ನು ನೋಡಿದ ಮನೆಯವರು ಆತಂಕಗೊಂಡು, ಕೂಡಲೇ ಉರಗ ತಜ್ಞರಿಗೆ ಮಾಹಿತಿ ಮುಟ್ಟಿಸಿದರು. ಹೌದು, ಮನೆಯೊಂದರ ಬಚ್ಚಲು ಮನೆಯಲ್ಲಿ ಅಡಗಿ ಕುಳಿತಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸ್ನೇಕ್ ಅಕ್ಬರ್ ರಕ್ಷಣೆ ಮಾಡಿದ್ದಾರೆ. ತಾಲೂಕಿನ ಕಾರೇಮನೆಯ ಚಂದ್ರಶೇಖರ ಭಟ್ಟ ಎನ್ನುವವರ ಮನೆಯ ಬಚ್ಚಲು ಮನೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾಳಿಂಗ ಸರ್ಪ ಅಡಗಿ ಕುಳಿತುಕೊಂಡಿತ್ತು.

ನಂತರ ಕಣ್ಣಿಗೇರಿ ಹಳಿಯಾಳ ಕ್ರಾಸ್ ನಿವಾಸಿ ಸ್ನೇಕ್ ಅಕ್ಬರ್ ಅವರನ್ನು ದೂರವಾಣಿ ಕರೆಮಾಡಿ ಕರೆಸಿಕೊಂಡು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ನಂತರ ಸ್ನೇಕ್ ಅಕ್ಬರ್ ಕಾಡಿಗೆ ಬಿಟ್ಟರು. ಹಾವು ಹಿಡಿಯುವುದರಲ್ಲಿ ಪರಿಣಿತಿ ಪಡೆದಿರುವ ಅಕ್ಬರ್ ಈಗಾಗಲೇ 1000ಕ್ಕೂ ಹೆಚ್ಚು ನಾಗರಹಾವು ಹಾಗೂ 30ಕ್ಕೂ ಹೆಚ್ಚು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888…

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version