Follow Us On

WhatsApp Group
Important
Trending

ಮಗ ಸತ್ತ ಜಾಗದಲ್ಲಿಯೇ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ: ಪುತ್ರ ಶೋಕದಲ್ಲಿಯೇ ಪ್ರಾಣ ತ್ಯಜಿಸಿದ ನಿವೃತ್ತ ಅರಣ್ಯ ಅಧಿಕಾರಿ

ಅಂಕೋಲಾ: ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಬೇಳಾಬಂದರ ನಿವಾಸಿ ಗಜಾನನ ಶಂಕರ ನಾಯ್ಕ (65), ಹಟ್ಟಿಕೇರಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಭವಿಸಿದೆ.  ಪುತ್ರ ಶೋಕ : ©Copyright reserved by Vismaya tv ಕಳೆದ 2 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಗ ವಿನಾಯಕ ನಾಯ್ಕ ಆಕಸ್ಮಿಕವಾಗಿ ರೈಲು ಬಡಿದು ಸಾವಿಗೀಡಾದ ಹಿನ್ನಲೆಯಲ್ಲಿ , ಅತೀವ ಶೋಕದಿಂದಿದ್ದ ತಂದೆ , ತಾವು ವಾಸವಾಗಿದ್ದ ಬಾಳೆಗುಳಿ ಬಳಿಯ ಐಶಾರಾಮಿ ಮನೆ ತೊರೆದು, ಬೇಳಾ ಬಂದರದಲ್ಲಿರುವ ಮಾವನ ಮನೆ ಬಳಿ ಚಿಕ್ಕ ಮನೆ ಮಾಡಿಕೊಂಡು ವಾಸವಾಗಿದ್ದರು ಎನ್ನಲಾಗಿದೆ. 

ಮಗನ ಸಾವಿನಿಂದ ನೊಂದಿದ್ದ ಹಿರಿಯ ಜೀವ ರಾಮನವಮಿ ಪೂಜೆ ಮುಗಿಸಿ, ಮಗ ಮೃತನಾದ ಜಾಗದಲ್ಲಿಯೇ ತನ್ನ ಪ್ರಾಣ ಅರ್ಪಿಸಿರುವುದು ದುರಂತವೇ ಸರಿ.  ಮೃತ ದೇಹ ಸಾಗಿಸುವಲ್ಲಿ  ಸಾಮಾಜಿಕ ಕಾರ್ಯಕರ್ತ  ಕನಸಿಗದ್ದೆಯ  ವಿಜಯ ಕುಮಾರ ನಾಯ್ಕ , ಸಹಾಯಕ ಬೊಮ್ಮಯ್ಯ ನಾಯ್ಕ, ಹಾಗೂ ಪೊಲೀಸ್ ಸಿಬ್ಬಂದಿಗಳು ಸಹಕರಿಸಿದರು. ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ತನಿಖೆ ಮುಂದುವರೆಸಿದ್ದಾರೆ.     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button