Follow Us On

WhatsApp Group
Important
Trending

ಕ್ವಾರಂಟೈನಲ್ಲಿದ್ದ ಯುವಕನೋರ್ವ ಲಾಡ್ಜ್ ಕೊಠಡಿಯಲ್ಲೇ ನೇಣು ನೇಣುಬಿಗಿದುಕೊಂಡು ಸಾವಿಗೆ ಶರಣು

ಭಟ್ಕಳ: ಪೂಣಾದಿಂದ ಊರಿಗೆ ಮರಳಿ ಮುರುಡೇಶ್ವರದ  ಲಾಡ್ಜ್ ನಲ್ಲಿ ಕ್ವಾರಂಟೈನಲ್ಲಿದ್ದ ಯುವಕನೋರ್ವ ಲಾಡ್ಜ್ ಕೊಠಡಿಯಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ.   ಭಟ್ಕಳ ತಾಲೂಕಿನ ಬೆಂಗ್ರೆ, ಬೊಗ್ರಿಜಡ್ಡು ನಿವಾಸಿಯಾಗಿದ್ದು ಪೂಣಾದಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ  28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಮೃತ ದುರ್ದೈವಿ.

ಈತನು ಕಳೆದ 13 ವರ್ಷಗಳಿಂದ ಪೂಣಾದಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದವನು, ಊರಿನಲ್ಲಿ ಏನಾದರು ಕಾರ್ಯಕ್ರಮ ಇದ್ದರೆ ವರ್ಷಕ್ಕೆ ಒಂದು ಬಾರಿ ಊರಿಗೆ ಬಂದು ಹೋಗುತಿದ್ದನು.  ವೆಂಕಟೇಶ ಈತನು ಕಳೆದ 5-6 ದಿವಸಗಳ ಹಿಂದೆ ಪೂಣಾದಿಂದ ಮುರ್ಡೇಶ್ವರಕ್ಕೆ ಬಂದು ಪೂಣಾದಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಮುರ್ಡೇಶ್ವರದ ಪೆಟ್ರಿಶಿಯಾ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಕ್ವಾರಂಟೈನಲ್ಲಿ ಇದ್ದ.

ಈ ನಡುವೆ  ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು  ರಾತ್ರಿಯ ವೇಳೆಗೆ ತಾನಿದ್ದ  ಪೆಟ್ರಿಶಿಯಾ ಲಾಡ್ಜಿನ ಕೊಠಡಿಯ ಕಿಟಕಿಯ ಮೇಲ್ಬದಿಯ ಕಬ್ಬಿಣದ ಸರಳಿಗೆ ಒಂದು ಟವೆಲ್ ಕಟ್ಟಿ, ಉರುಳು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ಮೃತನ ಸಹೋದರ  ಗಣಪತಿ  ಸುಕ್ರಯ್ಯ ದೇವಡಿ ಅವರು ಮುರುಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button