500 ಕೆ.ಜಿ ದನದ ಮಾಂಸ ಅಕ್ರಮವಾಗಿ ಸಾಗಾಟ: ಮೂವರ ಬಂಧಿಸಿದ ಪೊಲೀಸರು

ಭಟ್ಕಳ:  ಅಕ್ರಮವಾಗಿ ಹಣ್ಣಿನ ವಾಹನವೊಂದರಲ್ಲಿ 500 ಕೆ.ಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ
ಶಿರಾಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವಾಹನ ತಡೆ ಹಿಡಿದು ವಾಹನ ಜೊತೆ ಮಾಂಸವನ್ನು ವಶಪಡಿಸಿಕೊಂಡು ಘಟನೆ ಮಂಗಳವಾರ ನಡೆದಿದೆ.

ಆರೋಪಿಗಳಾದ ಮೌಲಾಲಿ ಭಾಷಾಸಾಬ್,ಜಿಲಾನಿ ಗೌಸ್ ಮೋಹಿದ್ದೀನ್ ಅತ್ತಾರ್ ಹಾವೇರಿ ಹಾನಗಲ್ ನಿವಾಸಿ ಹಾಗೂ ಭಟ್ಕಳದ ಮುಜಾಫರ್ ಎಂದು ತಿಳಿದು ಬಂದಿದೆ.

ಶಿರಾಲಿ ಪೊಲೀಸ್ ಚೆಕ್ ಪೋಸ್ಟನಲ್ಲಿ ವಾಹನ ಸಂಖ್ಯೆ ಕೆ.ಎ. 25/AA9658 ರ ಹಿಂಬದಿಯಲ್ಲಿ ಸುಮಾರು 1 ಲಕ್ಷ ಮೌಲ್ಯದ ಸುಮಾರು 500 ಕೆ.ಜಿ. ಆಗುವಷ್ಟು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಯಾವುದೇ ಪರವಾನಿಗೆ ಪಡೆಯದೇ ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ವಾಹನದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ವೇಳೆ ಶಿರಾಲಿ ಪೊಲೀಸ ಚೆಕ್ ಪೋಸ್ಟನಲ್ಲಿ ವಾಹನ ಸಮೇತ ಸಿಕ್ಕಿ ಬಿದ್ದಿದ್ದಾರೆ.

ದನ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಹಣ್ಣು ತುಂಬುವ ಖಾಲಿ ಟ್ರೇ ಹಾಗೂ ದನದ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಗ್ರಾಮೀಣಾ ಠಾಣಾ ಎಎಸೈ ಕೃಷ್ಣಾನಂದ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888…

Exit mobile version