ಹಂಡೆಯನ್ನು ಕದ್ದ ಇಬ್ಬರು ಕಳ್ಳರು ಅಂದರ್! ಶಿರಸಿ ಪೊಲೀಸರ ಕಾರ್ಯಾಚರಣೆ

ಶಿರಸಿ: ಇವರು ಐನಾತಿ ಕಳ್ಳರು. ಮನೆಯ ಎದುರಿಗಿದ್ದ ಹಂಡೆಯನ್ನು ಸಹ ಬಿಟ್ಟಿಲ್ಲ! ಹೌದು, ತಾಮ್ರದ ಹಂಡೆ ಕದ್ದ ಕಳ್ಳರನ್ನು ಶಿರಸಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸಾಮ್ರಾಟ್ ಹೊಟೇಲ್ ಎದುರಿಗಿನ ನೀಲಕಂಠ ನಾರಾಯಣ ಮುರ್ಡೇಶ್ವರ ಎನ್ನುವವರ ಮನೆಯ ಎದುರಿನ ಖಾಲಿ ಜಾಗದಲ್ಲಿ ಇರಿಸಿದ್ದ ತಾಮ್ರದ ಹಂಡೆ ಯನ್ನು ಇಬ್ಬರು ಕಳ್ಳರು ಸೇರಿ ಕದ್ದಿದ್ದರು. ಇದೀಗ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದಾರೆ.

ಶಿರಸಿ ಗಣೇಶ ನಗರದ ಸಲೀಂ ಸಾಬ್ದಾನಸಾಬ್ ಶಿವಮೊಗ್ಗ ಹಾಗೂ ದೇವಿದಾಸ ಪಾಪ ಗೋಸಾವಿ ಬಂಧಿತ ಆರೋಪಿಗಳು. ಇವರಿಂದ ಸುಮಾರು 8 ಕೆ.ಜಿ ತೂಕದ ತಾಮ್ರದ ಹಂಡೆ ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಶಿರಸಿ ಸಿ.ಪಿ.ಐ ರಾಮಚಂದ್ರ ನಾಯಕ,ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ಭೀಮಾಶಂಕರ ಅಪರಾಧ ವಿಭಾಗ ಪಿ.ಎಸ್.ಐ ಜಯಶ್ರೀ ಸಿಬ್ಬಂದಿ ಗಳಾದ ಮೊಹಮ್ಮದ್ ಇಸ್ಮಾಯಿಲ್ ಕೋಣನಕೇರಿ,ರಾಮಯ್ಯ ಪೂಜಾರಿ,ಹನುಮಂತ ಬಂಕಾಪುರ,ಮೋಹನ ನಾಯ್ಕ ಮತ್ತು ಪಾಂಡುರoಗ ನಾಗೋಜಿ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.       

ವಿಸ್ಮಯ ನ್ಯೂಸ್, ಶಿರಸಿ

Exit mobile version