Follow Us On

WhatsApp Group
Focus News
Trending

9 ಎತ್ತುಗಳ ರಕ್ಷಣೆ: ಆರೋಪಿಗಳು ಪರಾರಿ: ಭಟ್ಕಳ ನಗರ ಠಾಣೆ ಪೊಲೀಸರ ಕಾರ್ಯಾಚರಣೆ

ಭಟ್ಕಳ: ಹಿಂಸಾತ್ಮಕವಾಗಿ 9 ಎತ್ತುಗಳನ್ನು  ಸಾಗಿಸುತ್ತಿದ್ದ  ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಭಾನವಾರ ಇಲ್ಲಿನ ಬಂದರ್ ರೋಡ್ 6ನೇ ಕ್ರಾಸ್ ಸಮೀಪ ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ  ಆರೋಪಿ ಪರಾರಿಯಾಗಿದ್ದು, ಆರೋಪಿಗಳನ್ನಾಗಿ ಮೋಹಿದ್ದೀನ್ ಪಾತೀಮಿ,ಹನೀಫ್ ಹಾಗೂ ವಾಹನದ ಚಾಲಕ  ಎಂದು ಗುರುತಿಸಲಾಗಿದೆ.

ಇವರು ಇಚರ್ ವಾಹನದಲ್ಲಿ ವದೆ ಮಾಡುವ ಉದ್ದೇಶದಿಂದ 6 ಲಕ್ಷಕ್ಕೂ ಅಧಿಕ ಮೌಲ್ಯದ 9 ಬ್ರಹತ್ ಆಕಾರದ ಎತ್ತುಗಳನ್ನು ಪಾಸ್ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಭಟ್ಕಳ ನಗರ ಠಾಣೆ ಪೊಲೀಸರು ದಾಳಿ ನಡೆದಿದ್ದಾರೆ. ಬಂದರ್ ರೋಡ್  6 ನೇ ಕ್ರಾಸ ಸಮೀಪ ಮುಗ್ದುಮ್ ಕಾಲೊನಿಯಲ್ಲಿ  ದಾಳಿ ಮಾಡಿ ವಾಹನ ಸಮೇತ 9 ಎತ್ತುಗಳನ್ನು ರಕ್ಷಣೆ ಮಾಡಿದ್ದಾರೆ.

ಈ ಕುರಿತು ಭಟ್ಕಳ ನಗರ ಠಾಣೆಯ ಪಿ.ಎಚ್.ಐ ಎಚ್.ಪಿ ಕುಡಗುಂಟಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿ.ಎಸೈ ಎಚ್.ಪಿಈ ಕುಡುಗುಂಟಿ, ಗ್ರಾಮೀಣ ಠಾಣೆ ಪಿ.ಎಸೈ ಭರತ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button