Follow Us On

WhatsApp Group
Important
Trending

ಕೋವಿಡ್ ಪಾಸಿಟಿವ್ ಬಂದಿದ್ದಕ್ಕೆ ಮನನೊಂದ ಮಹಿಳೆ ಬಾವಿಗೆ ಹಾರಿ ಸಾವಿಗೆ ಶರಣು

ಯಲ್ಲಾಪುರ: ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಹಾಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಶ್ಮಿ ಸುಧೀರ್ ರಾಯ್ಕರ್ ಎಂದು ಗುರುತಿಸಲಾಗಿದೆ.

ಈಕೆ ಕಳೆದ ಹತ್ತು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈಗ ಕೋವಿಡ್ ಬಂದಿದ್ದು, ಇದರಿಂದ ಮನನೊಂದಿದ್ದಳು ಎನ್ನಲಾಗಿದೆ. ಪದೇ ಪದೇ ಕಾಡುವ ಅನಾರೋಗ್ಯದ ಹಿನ್ನಲೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿಸ್ಮಯ ನ್ಯೂಸ್ ಯಲ್ಲಾಪುರ

Back to top button