
ಕಾರವಾರ: ನೆರೆ ಪ್ರವಾಹದಿಂದಾಗಿ ತಡರಾತ್ರಿಯಿಂದ ಮುಳುಗಡೆಯಾಗಿದ್ದ ಮಣ್ಣಿನ ಮನೆಯೊಂದು, ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿರುವ ಘಟನೆ ಅಂಕೋಲಾ ಹಿಚ್ಕಡ ಗ್ರಾಮದಲ್ಲಿ ನಡೆದಿದೆ. ಗಂಗಾವಳಿ ನದಿ ಪ್ರವಾಹದಿಂದ ತಡರಾತ್ರಿಯೇ ಮನೆಗಳಿಗೆ ನುಗ್ಗಿದ್ದ ನೀರು ಇಂದು ಕೂಡ ಇಳಿಯ ಕಾರಣ ಮಣ್ಣಿನ ಗೋಡೆ ನೆನೆದಿತ್ತು. ಇಂದು ಮಧ್ಯಾಹ್ನದ ಬಳಿಕ ಮನೆಯವರ ಎದುರೇ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇನ್ನು ಹಿಚ್ಕಡ ಗ್ರಾಮ ಬಹುತೇಕ ನೆರೆಯಿಂದ ಜಲಾವೃತಗೊಂಡಿದ್ದು 50ಕ್ಕೂ ಹೆಚ್ಚು ಮನೆಗಳು ಭಾಗಶಃ ಮುಳುಗಡೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಈ ಭಾಗದ ಸ್ಥಳೀಯರನ್ನು ಸ್ಥಳಾಂತರ ಮಾಡಲಾಗಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಇಂದಿನ ಪ್ರಮುಖ ಸುದ್ದಿಗಳ ಲಿಂಕ್ ಈ ಕೆಳಗೆ ಇದೆ.
- ಯಶಸ್ವಿ ಉದ್ಯಮಿ, ಕಾಂಗ್ರೆಸ್ ಧುರೀಣ ಯಶೋಧರ ನಾಯ್ಕ ನಿಧನ
- ಭಾರೀ ಮಳೆ ಹಿನ್ನಲೆ: ಶಾಲೆಗಳಿಗೆ ರಜೆ ಘೋಷಣೆ
- ರೆಡ್ ಅಲರ್ಟ್ ಹಿನ್ನಲೆ; ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
- ಮಂದಾರಾ ಎಲೈಟ್ಸ್ ರೀಲ್ಸ್ ಮೇಕಿಂಗ್ ಕಾಂಪಿಟೇಷನ್: 15 ಸಾವಿರ ನಗದು ಗೆಲ್ಲುವ ಸುವರ್ಣಾವಕಾಶ
- ಬಸ್ ಕೆಳಗೆ ಸಿಕ್ಕಿಹಾಕಿಕೊಂಡಿದ್ದ ದನ: ಎರಡು ತಾಸು ಬಳಿಕ ಹೊರಟ ಬಸ್
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್