Follow Us On

WhatsApp Group
Big News
Trending

ಬೃಹತ್ ಕಾಳಿಂಗ ಸರ್ಪವನ್ನು ನುಂಗಲು ಯತ್ನಿಸಿದ ಹೆಬ್ಬಾವು: ಅರ್ಧಗಂಟೆಗೂ ಹೆಚ್ಚು ಕಾಲ ನಡೆಯಿತು ಕಾಳಿಂಗ ಮತ್ತು ಹೆಬ್ಬಾವಿನ ಕಾಳಗ

ಕಾರವಾರ: ಕಾಳಿಂಗ ಸರ್ಪ ಹಾಗೂ ಹೆಬ್ಬಾವು ಸೆಣಸಾಡಿದ ಘಟನೆ ನಗರದ ಹರಿದೇವ ನಗರದಲ್ಲಿ ನಡೆದಿದೆ. ಈ ದೃಷ್ಯ ಕಂಡ ಜನರಲ್ಲಿ ಆತಂಕಗೊAಡಿದ್ದರು. ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ಸುಮಾರು 6 ಅಡಿ ಉದ್ದದ ಹೆಬ್ಬಾವು ಒಂದಕ್ಕೊoದು ಸುತ್ತಿಕೊಂಡು ಅರ್ಧಗಂಟೆಗೂ ಹೆಚ್ಚು ಕಾಲ ಸೆಣಸಾಡಿವೆ.

ಹೆಬ್ಬಾವು ಕಾಳಿಂಗ ಸರ್ಪವನ್ನು ನುಂಗಲು ಯತ್ನಿಸಿತ್ತು. ಆದರೆ ಕಾಳಿಂಗದ ಉದ್ದ ಹೆಚ್ಚಾಗಿದ್ದರಿಂದ ಪೂರ್ತಿಯಾಗಿ ನುಂಗಲು ಹೆಬ್ಬಾವಿಗೆ ಸಾಧ್ಯವಾಗಿಲ್ಲ. ಎರಡು ಹಾವುಗಳು ಕಾದಾಡಿ ಸಾವನ್ನಪ್ಪುವ ಸ್ಥಿತಿಯಲ್ಲಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಅವುಗಳನ್ನು ರಕ್ಷಣೆ ಮಾಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಕಾಳಿಂಗ ಸರ್ಪವನ್ನು ಹೆಬ್ಬಾವಿನಿಂದ ರಕ್ಷಣೆ ಮಾಡುವಾಗ, ಸರ್ಪ ಹೆಬ್ಬಾವಿಗೆ ಕಚ್ಚಿದ್ದು, ಹೆಬ್ಬಾವಿನ ಸ್ಥಿತಿ ಗಂಭೀರಗೊAಡಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button