Follow Us On

Google News
Important
Trending

“ನೋಡಪ್ಪ, ಮೋದಿ ಪ್ಯಾನು, ಸ್ವಚ್ಛ ಭಾರತ ಮಾಡ್ತಿದ್ದಾಳೆ” ಅಂತ ಟೀಕಿಸಿ ಮಹಿಳೆಯ ಮುಂದೆಯೇ ಕಸ ಎಸೆದ ವಿದ್ಯಾವಂತ ಪ್ರವಾಸಿಗರು : ಯಾಣದಲ್ಲಿ ಕಸ ಆರಿಸುತ್ತಿದ್ದ ಮಹಿಳೆ ಟೀಕಿಸಿದ್ದಕ್ಕೆ ಸಾರ್ವಜನಿಕರ ಆಕ್ರೋಶ

ಕುಮಟಾ: ವಿಶ್ವಪ್ರಸಿದ್ಧ ಯಾತ್ರಾ ಸ್ಥಳವಾದ ಯಾಣದಲ್ಲಿ ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಪ್ರವಾಸಿಗರು ಅಣಕಿಸಿದ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರವಾಸಿಗರು ಓಡಾಡುವ ದಾರಿಯಲ್ಲಿ ಬಿದ್ದ ಕಸವನ್ನು ಹೆಕ್ಕುವ ಕಾರ್ಯ ನಿರ್ವಹಿಸುತ್ತಿರುವ ಶೈಲ ಎಂಬ ಮಹಿಳೆಯನ್ನು ಪ್ರವಾಸಿಗರು ಟೀಕಿಸಿದ್ದಾರೆ. ಈ ರೀತಿ ಸ್ವಚ್ಛತಾ ಸಿಬ್ಬಂದಿಗಳ ಮೇಲೆ ವ್ಯಂಗ್ಯ ಮಾಡಿದ ಬಗ್ಗೆ ಪಶ್ಚಿಮ ಘಟ್ಟಗಳು Western Gha ಎಂಬ ಟ್ವಿಟರ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಯಾಣ ಗ್ರಾಮ ಅರಣ್ಯ ಸಂಘ ಹಾಗೂ ರಾಜ್ಯ ಅರಣ್ಯ ಇಲಾಖೆಯ ವತಿಯಿಂದ ಪ್ಲಾಸ್ಟಿಕ್ ತೆರವು ಕಾರ್ಯದಲ್ಲಿ, ತಮ್ಮ ತಂಡದೊoದಿಗೆ ಕೆಲ ವರ್ಷಗಳಿಂದ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ಯಾಣಕ್ಕೆ ಬಂದ ಪ್ರವಾಸಿಗರು, ಈ ಮಹಿಳೆಯನ್ನು ಟೀಕಿಸಿದ್ದು, “ನೋಡಪ್ಪ, ಮೋದಿ ಪ್ಯಾನು, ಸ್ವಚ್ಛ ಭಾರತ ಮಾಡ್ತಿದ್ದಾರೆ” ಅಂತ ಟೀಕಿಸಿ, ಅವರ ಎದುರಿನಲ್ಲಿ ಕಸ ಎಸೆದು ಅಮಾನವೀಯತೆ ತೋರಿದ್ದಾರೆ ಎಂದು ಟ್ವಿಟರ್ ಖಾತೆಯಲ್ಲಿ ಟೀಕಿಸಲಾಗಿದೆ.

ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ದಿಟ್ಟ ಮಹಿಳೆ ತಮ್ಮ ಸ್ವಚ್ಛತಾ ಕಾರ್ಯ ಮುಂದುವರೆಸಿದ್ದಾರೆ. ಇಂತಹ ಹೀನ ಮನಸ್ಥಿತಿ ಹೊಂದಿದವರಿoದ ಕೆಲ ಪ್ರವಾಸಿಗರ ವರ್ತನೆಯಿಂದ ಅರಣ್ಯ ಸಂಪೂರ್ಣ ಕಸಮಯವಾಗುತ್ತಿದೆ. ವಿದ್ಯಾವಂತರು ಎಂದು ಕರೆಸಿಕೊಳ್ಳುವವರು, ಇಂತ ಕೃತ್ಯ ಮಾಡುತ್ತಿರುವುದು ವಿಪರ್ಯಾಸವೇ ಸರಿ.

ವಿಸ್ಮಯ ನ್ಯೂಸ್, ಕುಮಟಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button