Follow Us On

WhatsApp Group
Important
Trending

ಪ್ರೀತಿಸಿದವನಿಂದಲೇ ಯುವತಿ ಕೊಲೆ ಯಾಗಿರುವ ಶಂಕೆ !ಪ್ರೀತಿಸಿದವನ ಡೆತ್ ನೋಟ್ ನಲ್ಲಿ ಏನಿದೆ?

ಭಟ್ಕಳ: ಹೊಸನಗರ ತಾಲೂಕು ಬೆಳ್ಳೂರು ಸಮೀಪದ ನೇರಲಗಿ ಕೆರೆ ಬಳಿ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಪ್ರೀತಿಸಿದವನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆಕೆಯನ್ನು ಕವಿತಾ ಎಂದು ಗುರುತಿಸಲಾಗಿದೆ.

ಬೆಳ್ಳೂರು ಗ್ರಾಮದ (22 ವರ್ಷ) ಶಿವಮೂರ್ತಿ ಎಂಬಾತ ವಿಷ ಸೇವಿಸಿ, ತನ್ನ ಮನೆಗೆ ಬಂದಾಗ ಆತನಿಂದ ಯುವತಿ ಶವ ಕೆರೆ ಪಕ್ಕದಲ್ಲಿ‌ ಇರುವುದು ತಿಳಿದಿದೆ. ಶಿವಮೂರ್ತಿ ರಿಪ್ಪನಪೇಟೆಯ ಪದವಿ ಕಾಲೇಜಿನಲ್ಲಿ ಓದುತ್ತಿದ್ದಾನೆ.

ಈತ ತಾನೊಂದು ಡೆತ್​ನೋಟ್​ ಬರೆದಿದ್ದು, ಅದರಲ್ಲಿ ತಾನು ಭಟ್ಕಳ ಮೂಲದ ಯುವತಿಯನ್ನು ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದೆ, ಆಕೆಯೂ ಸಹ ತನ್ನನ್ನು ಪ್ರೀತಿಸುತ್ತಿದ್ದಳು. ಆದರೆ, ಕೆಲ ದಿನಗಳಿಂದ ಭದ್ರಾವತಿಯ ಆ್ಯಂಬುಲೆನ್ಸ್ ಡ್ರೈವರ್​ನನ್ನು ಪ್ರೀತಿಸಲು ಶುರು ಮಾಡಿದ್ದಳು.

ಇದರಿಂದ ಆಕೆಯನ್ನು ಕರೆದು ಯಾಕೆ ಬೇರೆಯವರನ್ನು ಪ್ರೀತಿಸುತ್ತಿಯಾ? ಎಂದು ಕೇಳಿದೆ. ಮುಂದೆ ನಡೆಯುವ ಘಟನೆಗೆ ಅವಳೇ ಕಾರಣ. ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೆ ಎಂದು ಡೆತ್​ನೋಟ್​ ಬರೆದಿದ್ದಾನೆ. ತಾನು ತನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.

ಈ ನಡುವೆ ವಿಷ ಸೇವಿಸಿ ಮನೆಗೆ ಬಂದ ಈತನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮತ್ತೊಂದು ಕಡೆ ಶವದ ಬಳಿ ವಿಷದ ಬಾಟಲಿ ಪತ್ತೆಯಾಗಿದೆ. ಸ್ಥಳಕ್ಕೆ ಹೊಸನಗರ ಸಿಪಿಐ ಮಧುಸೂಧನ್ ಭೇಟಿ ನೀಡಿ ಯುವತಿಯ ಶವವನ್ನು ರಿಪ್ಪನ್​ಪೇಟೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

Back to top button