Important
Trending

ಮಠದ ಸ್ವಾಮೀಜಿಗಳ ಕಪಾಟಿನಲ್ಲಿದ್ದ ಚಿನ್ನಾಭರಣ‌ ಕದ್ದ ಕಳ್ಳ ಅರೆಸ್ಟ್: ಮಠದಲ್ಲಿ ಕೆಲಸಕ್ಕೆ ಇದ್ದವ ಮಾಡಿದ್ದೇನು ನೋಡಿ?

ಹಳಿಯಾಳ: ಅಂಬಿಕಾನಗರದ ಜಗದ್ಗುರು ಪಂಚಾಚಾರ್ಯ ಮಠದಲ್ಲಿ ಕೆಲದಿನಗಳ ಹಿಂದೆ ಕಳ್ಳತನ ನಡೆಸಿದಿತ್ತು. ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಇದೀಗ ಆರೋಪಿಯನ್ನು ಹೊಸಪೇಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಠದ ಸ್ವಾಮೀಜಿಗಳ ಕಪಾಟಿನಲ್ಲಿದ್ದ 11 ಗ್ರಾಂ ತೂಕದ ಬಂಗಾರದ ಆಭರಣ, 50 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ 8 ಸಾವಿರ ನಗದನ್ನು ಕಳ್ಳತನ ಮಾಡಿ, ಕಳ್ಳರು ಪರಾರಿಯಾಗಿದ್ದರು.

ಈ ಪ್ರಕರಣದ ಬೆನ್ನು ಹತ್ತಿದ ಅಂಬಿಕಾನಗರ ಪೊಲೀಸರು ಈ ಮೊದಲು ಮಠದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸದ್ಯ ಹೊಸಪೇಟೆಯಲ್ಲಿ ವಾಸ್ತವ್ಯವಿರುವ ಹರೀಶ್ ವೀರಯ್ಯ ಹಿರೇಮಠ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಹರೀಶ್ ಹಿರೇಮಠ ಈ ಮೊದಲು ಅಂಬಿಕಾನಗರದ ಸ್ವಾಮೀಜಿಗಳ ಹತ್ತಿರವೇ ಕೆಲಸಕ್ಕಿದ್ದ. ಇದೀಗ ಹೊಸಪೇಟೆಯಲ್ಲಿ ವಾಸ ಮಾಡಿಕೊಂಡಿದ್ದ ಮಾಹಿತಿ ತಿಳಿದುಬಂದಿದೆ. ಬಂಧಿತ ಆರೋಪಿ ಹರೀಶ್ ಹಿರೇಮಠದಿಂದ ಪೋಲೀಸರು 50 ಸಾವಿರ ರೂಪಾಯಿ ಮೌಲ್ಯದ 9.6ಗ್ರಾಂ ಬಂಗಾರ 31 ಸಾವಿರ ರೂ ಮೌಲ್ಯದ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button