Follow Us On

Google News
Important
Trending

ಸೋದೆ ಮಠದಲ್ಲಿ ವಿಶ್ವೋತ್ತಮ ತೀರ್ಥ ಶ್ರೀಪಾದರ ಆರಾಧನೆ: ಮೂಲವೃಂದಾವನಕ್ಕೆ ವಿಶೇಷ ಪೂಜೆ

ಶಿರಸಿ: ಪರಮಪೂಜ್ಯ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರಆರಾಧನಾ ಪ್ರಯುಕ್ತ ಅವರ ಮೂಲವೃಂದಾವನಕ್ಕೆ ವಿಶೇಷ ಪೂಜೆಯನ್ನು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೆರವೇರಿಸಿದರು.

ಬಳಿಕ ಭೀಮನಕಟ್ಟೆ ಮಠಾಧೀಶ ಶ್ರೀರಘುವರೇಂದ್ರ ತೀರ್ಥರು ಮತ್ತು ಶೀರೂರು ಮಠಾಧೀಶ ಶ್ರೀವೇದವರ್ಧನ ತೀರ್ಥರ ಉಪಸ್ಥಿತಿಯಲ್ಲಿ ಗುರುಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ವಿದ್ವಾಂಸರಾದ ನಿಪ್ಪಾಣಿ ಶ್ರೀಗುರುರಾಜ ಆಚಾರ್ಯರು ಹಾಗೂ ಮಂಗಳೂರಿನ ಶಾರದಾ ವಿದ್ಯಾಲಯದ ಮತ್ತು ಕರ್ನಾಟಕ ವಿಶ್ವಹಿಂದೂ ಪರಿಷತ್‌ನ ಅಧ್ಯಕ್ಷರಾದ ಎಂ.ಬಿ. ಪುರಾಣಿಕರು ಗುರುಸಂಸ್ಮರಣೆಯನ್ನು ನಡೆಸಿಕೊಟ್ಟರು.

ಈ ವೇಳೆ ಮಠದಿಂದ ಪ್ರಕಾಶನಗೊಂಡ ನಿಪ್ಪಾಣಿ ಗುರುರಾಜ ಆಚಾರ್ಯರು ಸಂಪಾದಿಸಿದ ಶ್ರೀವಾದಿರಾಜ ಗುರುಸಾರ್ವಭೌಮರ ಸ್ವಪ್ನ ಪದ ಹಾಗೂ ಹರಿಸರ್ವೋತ್ತಮ ಸಾರ ಎಂಬ ಪುಸ್ತಕವನ್ನು ಯತಿತ್ರಯರು ಬಿಡುಗಡೆಗೊಳಿಸಿದು.

ವಿಸ್ಮಯ ನ್ಯೂಸ್ ಶಿರಸಿ

Back to top button