Follow Us On

WhatsApp Group
Important
Trending

ಗಂಡನಿಂದ ಪದೇ ಪದೇ ಮಾನಸಿಕ ಕಿರುಕುಳ : ನೇಣುಬಿಗಿದುಕೊಂಡು ಸಾವಿಗೆ ಶರಣಾದ ಮಹಿಳೆ

ಬನವಾಸಿ: ಮಾನಸಿಕ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಪತಿಯ ಕಿರುಕುಳ ತಾಳಲಾರದೆ ಪತ್ನಿ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಸಿದ್ದಾಪುರ ಮೂಲದ ಶಿಲ್ಪಾ ವಿಜಯೇಂದ್ರ ಪಾಟೀಲ್ ಮೃತ ದುರ್ದೈವಿ. ಎರಡು ವರ್ಷದ ಹಿಂದೆ ಈಕೆಗೆ ವಿವಾಹವಾಗಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದರು. ಆದರೆ, ಇತ್ತಿಚೆಗೆ ಗಂಡ ಹೆಂಡತಿಯ ಮಧ್ಯೆ ಮನಸ್ತಾಪ ಬಂದಿತ್ತು. ಹೀಗಾಗಿ ಹೆಂಡತಿಯನ್ನು ತವರು ಮನೆಗೆ ತಂದು ಬಿಟ್ಟುಹೋಗಿದ್ದ.

ಅಲ್ಲದೆ, ಇತ್ತಿಚೆಗೆ ಆರೋಪಿ ವಿಜಯೇಂದ್ರ ಪಾಟೀಲ್ ತವರು ಮನೆಗೆ ಬಂದು ಗಲಾಟೆ ಮಾಡಿ, ಹೆಂಡತಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದ. ಆಕೆಯ ನಡತೆಯ ಬಗ್ಗೆಗೂ ಇಲ್ಲ ಸಲ್ಲದ ಆರೋಪ ಮಾಡಿದ್ದ. ಇದರಿಂದ ಮನನೊಂದ ಹೆಂಡತಿ ಸಾವಿಗೆ ಶರಣಾಗಿದ್ದಾಳೆ. ಈ ಸಂಬoಧ ಮೃತ ಮಹಿಳೆಯ ತಂದೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button