Follow Us On

WhatsApp Group
Big News
Trending

ಬೆಕ್ಕನ್ನು ಎಳೆದು ನುಂಗಲೆತ್ನಿಸಿದ ನಾಗರ ಹಾವು !. ಜನ ಸೇರುತ್ತಿದ್ದಂತೆ ಮಬ್ಬುಗತ್ತಲಲ್ಲಿ ಕಣ್ಮರೆ

ಅಂಕೋಲಾ : ಪ್ರಕೃತಿ ಹಾಗೂ ಪ್ರಾಣಿ ಪಕ್ಷಿಗಳ ಆಹಾರ ಕ್ರಮಗಳಲ್ಲಿ ಕೆಲವೊಮ್ಮೆ ವಿಚಿತ್ರ ಸಂಗತಿಗಳು ಫಟಿಸುತ್ತಿರುವುದನ್ನು ನೋಡುತ್ತಿರುತ್ತೇವೆ.                  ಅಂತಹುದೇ ಒಂದು ಅಪರೂಪದ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಬಿತವಾಡಾ ಪ್ರದೇಶದಲ್ಲಿ ಭಾನುವಾರ ನಡೆದಿದೆ. 

ಸಮೀರ್ ಶೇಖ್ ಎನ್ನುವವರ ಮನೆ ಹತ್ತಿರ,ನಾಗರ ಹಾವೊಂದು ಬೆಕ್ಕನ್ನು ಎಳೆದು ನುಂಗಲು ಪ್ರಯತ್ನಿಸುತ್ತಿರುವಂತೆ,  ಸ್ಪಲ್ಪ ತಡವಾಗಿ  ಇದನ್ನು ಸ್ಥಳೀಯರು ಗಮನಿಸಿದ್ದಾರೆ. ಆ ವೇಳೆ ಹತ್ತಿರದಲ್ಲೇ ಇದ್ದ ಪ್ರವೇಶ ಸಾದಿಯೇ ಎನ್ನುವ ವ್ಯಕ್ತಿ  ತನ್ನ ಮೊಬೈಲ್ ಮೂಲಕ ವಿಡಿಯೋ   ಮಾಡಿದ್ದಾರೆ. ನಂತರ ಬೆಂಗಳೂರಿನ ಹೆಸರಾಂತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಹಾರವಾಡಾ ಮೂಲದ ಕಾರ್ತಿಕ ಪಾಂಡುರಂಗ ಭಟ್ಟ ಎನ್ನುವ ವ್ಯಕ್ತಿ ವಿಸ್ಮಯ ವಾಹಿನಿಗೆ ಈ ವಿಡಿಯೋ ಫಾರ್ವರ್ಡ್ ಮಾಡಿದ್ದಾರೆ.

ಸಾಮಾನ್ಯವಾಗಿ ಹಾವು ಮತ್ತು ಬೆಕ್ಕುಗಳು  ಆಹಾರಕ್ಕಾಗಿ ಇಲಿಗಳನ್ನು ಹಿಡಿಯುವುದು ವಾಡಿಕೆಯಾದರೂ,ಕೋಡಗನ ಕೋಳಿನುಂಗಿತ್ತಾ  ಎಂಬ ಜಾನಪದ ಪದ್ಯ ನೆನಪಿಸುವಂತೆ ಹಾರವಾಡದಲ್ಲಿ ಬೆಕ್ಕು ಇಲಿಯನ್ನು ನುಂಗಿ, ಇಲಿಯಾ ನುಂಗಿದ ಬೆಕ್ಕನ್ನೇ ಹಾವು ನುಂಗಿತ್ತಾ  ಎನ್ನುವಂತಾಗಿದೆ. ಸಂಜೆ ವೇಳೆ ನಡೆದ ಬಲು ಅಪರೂಪ ಮತ್ತು ಅಚ್ಚರಿ ಘಟನೆಯಲ್ಲಿ ನಾಗರಹಾವೊಂದು ಕರಿ ಬೆಕ್ಕನ್ನು ನುಂಗಲು ಯತ್ನಿಸಿದ ವಿಡಿಯೋ ವೈರಲ್ ಆಗುತ್ತಿದೆ.     

ಜನರು ಗುಂಪು ಸೇರುತ್ತಿರುವ  ಶಬ್ದದಿಂದ ತನ್ನ ಯೋಜನೆಗೆ  ತೊಡಕಾದಂತೆ ,ಸತ್ತ ಬೆಕ್ಕನ್ನು ಅಲ್ಲಿಯೇ ಬಿಟ್ಟ ನಾಗರ ಹಾವು ಸಂದಿಗೊಂದಿಗಳಲ್ಲಿ  ನುಸುಳಿ ಸಂಜೆಯ ಮಬ್ಬುಗತ್ತಲಲ್ಲಿ ಕಣ್ಮರೆಯಾಯಿತು ಎನ್ನಲಾಗಿದೆ.     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Back to top button