ಬೆಂಗಳೂರು ಬುಲ್ಸ್ ತಂಡಕ್ಕೆ ಕಟ್ಟೆವೀರ ತಂಡದ ಆಟಗಾರ ವಿನೋದ ನಾಯ್ಕ ಆಯ್ಕೆ: ಸಾಧಕ ಆಟಗಾರನಿಗೆ ಅಭಿನಂದನೆ ಸಲ್ಲಿಸಿ

ಭಟ್ಕಳ: ದೇಶದ ಕ್ರೀಡಾ ಕ್ಷೇತ್ರದಲ್ಲಿ ರೋಮಾಂಚನ ಸೃಷ್ಟಿಸಿ ರುವ ಪ್ರೋ ಕಬಡ್ಡಿ ಪಂದ್ಯಾವಳಿಗೆ ಬೆಂಗಳೂರು ಬುಲ್ಸ್ ತಂಡದ ಆಟಗಾರನಾಗಿ ಭಟ್ಕಳ ತಾಲೂಕು ಬೆಳಕೆಯ ನಿವಾಸಿ ವಿನೋದ ಲಚ್ಚಯ್ಯ ನಾಯ್ಕ ಆಯ್ಕೆಯಾಗಿದ್ದಾರೆ.

ತಾಲೂಕಿನ ಮುಂಚೂಣಿ ಕಬಡ್ಡಿ ತಂಡಗಳಲ್ಲಿ ಒಂದಾದ ಕಟ್ಟೆವೀರ ತಂಡದ ಆಟಗಾರನಾಗಿರುವ ವಿನೋದ, ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿ ಯಲ್ಲಿ ಕರ್ನಾಟಕ ತಂಡದ ಪರ ಆಡಿದ ಅನುಭವವನ್ನು ಹೊಂದಿದ್ದಾರೆ. ಅಲ್ಲದೇ ಈ ಹಿಂದೆ ರಾಷ್ಟ್ರೀಯ ಜೂನಿ ಯರ್ ಕಬಡ್ಡಿ ತರಬೇತಿ ಶಿಬಿರಕ್ಕೂ ಆಯ್ಕೆಯಾಗಿದ್ದಾನೆ.

ಇದರೊಂದಿಗೆ ಹೊಸ ಅವಕಾಶದ ಬಾಗಿಲು ತೆರೆದುಕೊಂಡಂತಾ ಗಿದೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿ ರುವ ವಿನೋದನಿಗೆ ಇಲ್ಲಿನ ಕಟ್ಟೇವೀರ ಸ್ಪೋರ್ಟ್ಸ್ ಕ್ಲಬ್ ಆಶ್ರಯ ನೀಡುತ್ತ
ಬಂದಿದೆ.

ಸ್ಪೋರ್ಟ್ಸ್ ಕ್ಲಬ್ಬಿನ ನೆರವಿನೊಂದಿಗೆ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಓದು ಮುಂದುವರೆಸಿರುವ ವಿನೋದ, ಪ್ರಸ್ತುತ ಎಮ್‌ಎಸ್‌ಡಬ್ಲ್ಯೂ ಪದವಿ 2ನೇ ವರ್ಷದ ಅಧ್ಯಯನ ನಡೆಸುತ್ತಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಸತೀಶ ನಾಯಕ ಅವರಿಂದ ತರಬೇತಿ ಪಡೆದು ಕಬಡ್ಡಿಯಲ್ಲಿ ಇತಿಹಾಸ ಸೃಷ್ಟಿಸುವತ್ತ ಹೆಜ್ಜೆಯನ್ನು ಇಟ್ಟಿದ್ದಾರೆ. ಡಿ.10ರಿಂದ ಪ್ರೋ ಕಬಡ್ಡಿ ಆರಂಭವಾಗಲಿದ್ದು,ಸದ್ಯದ ಮಾಹಿತಿಯ ಪ್ರಕಾರ ವಿನೋದ, ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಏಕೈಕ ಕರ್ನಾಟಕದ ಆಟಗಾರರಾಗಿದ್ದಾರೆ.

ವಿನೋದ ಆಯ್ಕೆಗೆ ಶಾಸಕ ಸುನೀಲ್ ನಾಯ್ಕ,ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ಬಿನ ಪ್ರಮುಖರಾದ ಶ್ರೀಧರ ನಾಯ್ಕ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Exit mobile version