Follow Us On

WhatsApp Group
Important
Trending

ಯುವಕನೊಬ್ಬ ಸೇತುವೆಯಿಂದ ಕಾಳಿ ನದಿಗೆ ಹಾರಿ ಸಾವು: ಮೃತದೇಹ ಪತ್ತೆ

ಕಾರವಾರ: ಯುವಕನೊಬ್ಬ ಸೇತುವೆಯಿಂದ ಕಾಳಿ ನದಿಗೆ ಹಾರಿ ಸಾವಿಗೆ ಶರಣಾದ ಘಟನೆ ಕೋಡಿಭಾಗದ ಅಳ್ಳೇವಾಡದ ಬಳಿ ನಡೆದಿದೆ. ಈತ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ತಾಲೂಕಿನ ಹರಿದೇವನಗರದ ಹಜರತ್ ಸಾಬ್ (23) ಸಾವಿಗೆ ಶರಣಾದ ವ್ಯಕ್ತಿ. ಯಾವುದೋ ವಿಷಯದಿಂದ ನೊಂದ ವ್ಯಕ್ತಿ ಕಾಳಿ ಸೇತುವೆಯಿಂದ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತದೇಹ ಪತ್ತೆಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.


ವಿಸ್ಮಯ ನ್ಯೂಸ್, ಕಾರವಾರ

Back to top button