Focus News
Trending

ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ವತಿಯಿಂದ ಕಾಂಗ್ರೆಸ್  ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ಸಿನ ವತಿಯಿಂದ ಕಾಂಗ್ರೆಸ್  ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೊಕಾ ಮನೆ ಮನೆಗೆ ತೆರಳಿ ಹಲವರಿಗೆ ಕಾಂಗ್ರೆಸ್ ಸದಸ್ಯತ್ವ  ನೋಂದಣಿ ಮಾಡಿದರು. ಮೊದಲನೆಯದಾಗಿ ತಾಲೂಕು ಪಂಚಾಯತ ಹೊನ್ನಾವರದ ಮಾಜಿ ಅಧ್ಯಕ್ಷೆ ಶ್ರೀಮತಿ ಗೌರಿ ಮುಕ್ರಿ ಇವರ ಮನೆಗೆ ತೆರಳಿ ಇವರ ಕಾಂಗ್ರೆಸ್ ಸದಸ್ಯತ್ವ ನವೀಕರಣಗೊಳಿಸಿದರು. ಅದೇ ರೀತಿ ಅವರ ಕುಟುಂಬದ ಸದಸ್ಯರಿಗೆ  ಸದಸ್ಯತ್ವ ನೋಂದಣಿ ಮಾಡಲಾಯಿತು. 

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರರವರು ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರುಗಳು ಮತ್ತು ಪದಾಧಿಕಾರಿಗಳು ಸದಸ್ಯತ್ವ ನೋಂದಣಿ ಅಭಿಯಾನದ ಮೂಲಕ ಬ್ರಹತ್ ಪ್ರಮಾಣದಲ್ಲಿ ತಮ್ಮ ತಮ್ಮ ಬೂತ್ ಗಳಲ್ಲಿ ಶನಿವಾರ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.  ಅದೇ ರೀತಿ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಹ ಹಲವೆಡೆ ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಂಡಿತು.  

ಕಡತೋಕಾ  ಚಂದಾವರ ಸಾಲಕೋಡ್ ಕರ್ಕಿ ಹಳದಿಪುರ ಕೆಕ್ಕಾರ್  ಮುಂತಾದ ಕಡೆ ಹಲವರಿಗೆ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಲಾಯಿತು.   ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿನೋದ್ ನಾಯ್ಕ, ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್, ಮಮತಾ ಶೇಟ್, ಮಹೇಶ್ ನಾಯ್ಕ ಸಂಕೊಳ್ಳಿ, ನಾಗವೇಣಿ ಗೌಡ ,  ಜಿಲ್ಲಾ  ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಗಜಾನನ ನಾಯ್ಕ ಸಾಲಕೋಡ್, ನವೀನ ನಾಯ್ಕ ಹಳದಿಪುರ, ರಾಮಚಂದ್ರ ನಾಯ್ಕ, ಹಿರಿಯ ಮುಖಂಡರುಗಳಾದ ಜನಾರ್ಧನ ನಾಯ್ಕ ಹಳದಿಪುರ, ಕೆ ಎಂ ನಾಯ್ಕ ಸಾಲಕೋಡ್, ನಾಗೇಶ್ ನಾಯ್ಕ, ಶ್ರೀನಾಥ್ ಶೆಟ್ಟಿ ಕಡತೊಕಾ, ಶ್ರೀಮತಿ ರೂಪಾ ಗೌಡ ಕೆಕ್ಕಾರ್, ಸುಬ್ರಾಯ ಗೌಡ ಕೆಕ್ಕಾರ್, ಪುರಂದರ ನಾಯ್ಕ, ಚಂದ್ರಕಾಂತ ನಾಯ್ಕ ಚಂದಾವರ, ವಿನಯ ನಾಯ್ಕ ಕಡನೀರ, ಪುರಂದರ ಗುಡ್ಡಿನಕಟ್ಟು, ಬಾಲು ಭಂಡಾರಿ, ಗಿರೀಶ್ ಗೌಡ ಹಳದಿಪುರ, ಮಹೇಶ್ ನಾಯ್ಕ ಹಳದಿಪುರ, ಶ್ರೀಪಾದ ಗೌಡ ಮುಂತಾದವರು ಭಾಗವಹಿಸಿದ್ದರು.

Back to top button