Follow Us On

WhatsApp Group
Focus News
Trending

ಕಾರ್ಯ ಸಿದ್ಧಿಗೆ ಕಾಯ ಮತ್ತು ಮನಸ್ಸು ಏಕಗೊಳ್ಳಬೇಕು: ಸ್ವರ್ಣವಲ್ಲಿ ಶ್ರೀಗಳು


ಶಿರಸಿ: ಮನುಷ್ಯ ಸಂಕಲ್ಪಿಸುವ ಕಾರ್ಯಗಳು ಸಿದ್ಧಿಸಲು ಕಾಯ ಮತ್ತು ಮನಸ್ಸು ಏಕವಾಗಿ ಕ್ರಿಯಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಅವರು ತಾಲೂಕಿನ ಬೆಂಗಳಿ ಶ್ರೀರಾಮೇಶ್ವರ ದೇವಸ್ಥಾನದ ಪುನರ್ ರ್ನಿರ್ಮಾಣದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.

ಸಂಕಲ್ಪ ಸಿದ್ದಿಗೆ ದೈವದ ಪೂರ್ಣ ಬಲವಿರಬೇಕು ಎಂಬುದನ್ನು ಮರೆಯಬಾರದು ಎಂದ ಶ್ರೀಗಳು, ಹೇಗೆ ಮನುಷ್ಯನ ಶರೀರಕ್ಕೆ ಕಾಲಸಂಬAಧಿ ಸವಕಳಿ, ಗಾಯ ಮುಂತಾದವುಗಳ ಕಾರಣಕ್ಕೆ ಶಕ್ತಿ ಕುಂದುತ್ತದೋ ಹಾಗೆ ದೇವಾಲಯಗಳಲ್ಲೂ ನೈಸರ್ಗಿಕ ಕಾರಣಕ್ಕೆ ಕಳಾಹಾನಿ ಸಂಭವಿಸುತ್ತದೆ ಎಂದರು,

ವಿಸ್ಮಯ ನ್ಯೂಸ್, ಶಿರಸಿ

Back to top button