Follow Us On

WhatsApp Group
Important
Trending

ಲಾರಿ ಹಾಗೂ ಕಾರ್ ನಡುವೆ ರಸ್ತೆ ಅಪಘಾತ: ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯ

ಸಿದ್ದಾಪುರ: ಲಾರಿ ಹಾಗೂ ಕಾರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಹಾಗೂ ಸಹ ಸವಾರನಿಗೆ ಗಾಯಗಳಾದ ಘಟನೆ ಮಾವಿನ ಗುಂಡಿಯಲ್ಲಿ ನಡೆದಿದೆ. ಸಾಗರ ಕಡೆಯಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕಾರಿಗೆ ಹೊನ್ನಾವರ ಕಡೆಯಿಂದ ಸಾಗರ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಹಾರುನ್ ಹಾಗೂ ಮುಬಾರಕ್ ಗೇರುಸೊಪ್ಪ ಇವರುಗಳಿಗೆ ಗಾಯವಾಗಿದೆ. ಘಟನೆಗೆ ಲಾರಿ ಚಾಲಕನ ಅತಿವೇಗ ಮತ್ತು ನಿಷ್ಕಳಜಿತನ ಕಾರಣ ಎನ್ನಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button