Follow Us On

WhatsApp Group
Focus News
Trending

ಅಯ್ಯಪ್ಪ ಭಕ್ತವೃಂದ ಸನ್ನಿದಿಯಲ್ಲಿ 3ನೇ ವರ್ಷದ ದೀಪೋತ್ಸವ: ಶ್ರದ್ಧಾಭಕ್ತಿಯಿಂದ ನೆರವೇರಿತು ವಿವಿಧ ಧಾರ್ಮಿಕ ಕಾರ್ಯಕ್ರಮ

ಹೊನ್ನಾವರ: ತಾಲೂಕಿನ ಇಡಗುಂಜಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಳಕೋಡ ಶ್ರೀ ಅಯ್ಯಪ್ಪ ಭಕ್ತವೃಂದ ಅಯ್ಯಪ್ಪನ ಸನ್ನಿದಿಯಲ್ಲಿ ಮೂರನೆ ವರ್ಷದ ದೀಪೋತ್ಸವ ಕಾರ್ಯಕ್ರಮ ನಡೆಯಿತು, ಕರ್ಕಿ ರಾಮೇಶ್ವರ ಕಂಭಿ ಸನ್ನಿಧಾನದ ರಾಜು ಗುರುಸ್ವಾಮಿ ಆಗಮಿಸುತ್ತಿದ್ದಂತೆ ಅವರಿಗೆ ಪಾದಪೂಜೆ ನೆರವೇರಿಸಿ ಬರಮಾಡಿ ಕೊಳ್ಳಲಾಯಿತು.

ಕರ್ಕಿ ರಾಮೇಶ್ವರ ಕಂಬಿಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಪಲ್ಲಕ್ಕಿ ಹಾಗೂ ಮೋಳ್ಕೋಡ ಗ್ರಾಮದ ನಾಗ ಯಕ್ಷಿ ದೇವರ ಪಲಕ್ಕಿಯ ಸಮೇತವಾಗಿ ಚಂಡೆ ಮಾದನದೊಂದಿಗೆ ಗ್ರಾಮ ದೇವರಾದ ಶ್ರೀ ಕ್ಷೇತ್ರಪಾಲ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಮೆರವಣಿಗೆ ಮೂಲಕ ತೀರ್ಥ ತರಲಾಯಿತು. ನಂತರ ಮಹಾಪೂಜೆ ಪಡಿ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸನ್ನಿಧಿಯಲ್ಲಿ ನಡೆದವು ನಂತರ ಸಾರ್ವಜನಿಕ ಭಕ್ತ ಭಾಂದವರಿಗೆ ಕಷ್ಟ-ಕಾರ್ಪಣ್ಯಗಳ ಕುರಿತು ಪಲ್ಲಕ್ಕಿಯಲ್ಲಿ ವಿಚಾರಣೆ ನಡೆಯಿತು,

ಈ ಎಲ್ಲಾ ಕಾರ್ಯಕ್ರಮವನ್ನು ಕರ್ಕಿ ರಾಮೇಶ್ವರ ಕಂಭಿ ಸನ್ನಿಧಾನದ ರಾಜು ಗುರುಸ್ವಾಮಿ ಹಾಗೂ ಹನ್ಮಂತ ಗುರುಸ್ವಾಮಿ ಮಾಳ್ಕೂಡ ಇವರು ನೇರವೇರಿಸಿದರು, ನಂತರ ನಮ್ಮ ವಿಸ್ಮಯ ಟಿವಿ ಯೋಂದಿಗೆ ಕರ್ಕಿ ರಾಮೇಶ್ವರ ಕಂಭಿ ಸನ್ನಿಧಾನದ ರಾಜು ಗುರುಸ್ವಾಮಿ ಮಾತನಾಡಿ ಸುಮಾರು 28 ವರ್ಷಗಳಕಾಲ ಶಬರಿಮಲೆ ಯ್ಯಾತ್ರೆಯನ್ನು ಕೈಗೋಂಡಿದೆನೆ. ಮಾಳ್ಕೋಡ ಸನ್ನಿಧಾನದ ಹನ್ಮಂತ ಗುರು ಸ್ವಾಮಿಯವರ ನೇತ್ರತ್ವದಲ್ಲಿ ಇಲ್ಲಿನ ಕಾರ್ಯಕ್ರಮಗಳನ್ನು ನೇರವೇರಿಸಿದ್ದೆನೆ. ಅಯ್ಯಪ್ಪ ಸ್ವಾಮಿಯ ಪಲ್ಲಕ್ಕಿ ಹಾಗೂ ಮೋಳ್ಕೋಡ ಗ್ರಾಮದ ನಾಗ ಯಕ್ಷಿ ದೇವಿಯ ಪಲಕ್ಕಿಯೋಂದಿಗೆ ಶ್ರೀ ಕ್ಷೇತ್ರಪಾಲ ಸ್ವಾಮಿ ದೇವಸ್ಥಾನದಿಂದ ತೀರ್ಥ ತಂದು ಮುಟ್ಟಿಸಿ ಮಹಾಪೂಜೆ ನೆರವೇರಿಸಿದ್ದೇವೆ . ನಂಬಿ ಬಂದ ಭಕ್ತರಿಗೆ ಅಯ್ಯಪ್ಪ ಸ್ವಾಮಿ ಒಳ್ಳೆಯದನ್ನು ಉಂಟುಮಾಡುತ್ತಾನೆ ಎಂದರು.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ:
ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button