Follow Us On

WhatsApp Group
Focus News
Trending

ಉಪನ್ಯಾಸಕರ ಕೊರತೆ: ಬಸ್ ಸಂಪರ್ಕ ಸಮಸ್ಯೆ: ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಸರಿಪಡಿಸಲು NSUI ಆಗ್ರಹ

ಸಿದ್ದಾಪುರ : ತಾಲೂಕಿನ  ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆ ಹಾಗೂ ಕಾಲೇಜಿಗೆ ತೆರಳಲು ಬಸ್ ಸಂಪರ್ಕ ಸಮಸ್ಯೆ ಎದುರಿಸುತ್ತಿದ್ದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಆಗ್ರಹಿಸಿ ಏನ್. ಎಸ್. ಯು. ಐ  ಜಿಲ್ಲಾಧ್ಯಕ್ಷ ವಿಶ್ವಗೌಡ ಇಟಗಿ ಇವರು  ಮಾಧ್ಯಮದ ಮೂಲಕ ಆಗ್ರಹವನ್ನು ಮಾಡಿದ್ದಾರೆ.

ತಾಲೂಕಿನಲ್ಲಿರುವ ಪಿಯು ಕಾಲೇಜ್ ಹಾಗೂ ಪ್ರಥಮ ದರ್ಜೆ ಕಾಲೇಜು ಗಳಿಗೆ ತೆರಳಲು ವಿದ್ಯಾರ್ಥಿಗಳು ಬಸ್  ಸಮಸ್ಯೆಯಿಂದಾಗಿ ದಿನನಿತ್ಯತರಗತಿ ಗಳಿಗೆ ಹೋಗಲು ಆಗದೆ ತೊಂದರೆ  ಎದುರಿಸುತ್ತಿದ್ದಾರೆ ಅಲ್ಲದೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ವಿದ್ಯಾಭ್ಯಾಸದ ಮೇಲೆ ಭಾರೀ ಪರಿಣಾಮ  ಉಂಟುಮಾಡುತ್ತದೆ ಇದು  ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಹಾಗೂ ಅವರ ಉದ್ಯೋಗ ಅವಕಾಶ ದ ಮೇಲೆ ತೊಂದರೆ ನೀಡುತ್ತದೆಹಾಗಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಯೋಚಿಸಿ ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ವ್ಯವಸ್ಥೆಯನ್ನು ಸರಿಪಡಿಸಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟವನ್ನು ನಡೆಸಬೇಕಾಗುತ್ತದೆ .

ಇದು ಕೇವಲ ನಮ್ಮ ತಾಲೂಕಿನ ಸಮಸ್ಯೆಯಲ್ಲ ಪ್ರತಿ ತಾಲೂಕಿನಲ್ಲಿ ಜಿಲ್ಲೆಯಾದ್ಯಂತ ಕಂಡುಬಂದಿದ್ದು ಸಿದ್ದಾ ಪುರದಿಂದ ಪ್ರತಿಭಟನೆಯು ಆರಂಭವಾಗಿ ಇಡೀ ಜಿಲ್ಲೆಯಾದ್ಯಂತ ನಡೆಯುತ್ತದೆ ಇದಕ್ಕೆ ತಾವುಗಳು ಅವಕಾಶವನ್ನ ನೀಡಬಾರದು ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ  ಪ್ರಮುಖರಾದ ಹರೀಶ್ ಹಸ್ವಿಗೋಳಿ, ಹೇಮಂತ್, ಪವನ್  ಪೂರ್ಣ ನಾಯ್ಕ್  ಮಂಜುನಾಥ್ ನಾಯ್ಕ್ ಮುಂತಾದವರು  ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button