Follow Us On

WhatsApp Group
Important
Trending

ಅಕ್ರಮವಾಗಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ: ಆರೋಪಿಗಳ ಬಂಧನ

ಸಿದ್ದಾಪುರ: ಆಕಳುಗಳನ್ನು ವಧೆ  ಮಾಡುವ ಸಲುವಾಗಿ ಅಕ್ರಮವಾಗಿ ವಾಹನದಲ್ಲಿ  ಹಿಂಸಾತ್ಮಕ ರೀತಿಯಲ್ಲಿ  ತುಂಬಿಕೊಂಡು  ಬಿಳಗಿ ಕಡೆಯಿಂದ  ಚಂದ್ರಗುತ್ತಿ ಕಡೆಗೆ ಸಾಗಾಟ ಮಾಡುತ್ತಿದ್ದ ವೇಳೆ ಆರೋಪಿತರು ವಾಹನದೊಂದಿಗೆ ಸಿಕ್ಕಿ ಬಿದ್ದಿರುವ ಘಟನೆ ಬಿಳಗಿ ಸಮೀಪದ ಕಲ್ಕಣಿ ಮಹಾಸತಿ ದೇವಸ್ಥಾನದ ಹತ್ತಿರ   ನಡೆದಿದೆ .

ರಾಮಪ್ಪ  ರಾಮಚಂದ್ರಪ್ಪ  ಕಡೆ ಜೋಳದ ಗುಡ್ಡ ಚಂದ್ರಗುತ್ತಿ ಸೊರಬ ಹಾಗೂ ಗೋವಿಂದ ಮಾಬ್ಲಾ ಗೌಡ, ಬಿಳಗಿ ಸಿದ್ದಾಪುರ ಇವರು ಸೇರಿಕೊಂಡು ಆರೋಪಿ ರಾಮಪ್ಪ  ಮಹಿಂದ್ರ ಜೀತೋ ವಾಹನ ನಂಬರ KA 15 A 3604 ಮೇಲಾಗಿ ಹೇರಿಕೊಂಡು ಸಾಗಾಟ ಮಾಡಿಕೊಂಡು ಬರುತ್ತಾ ಇನ್ನೊಬ್ಬ ಆರೋಪಿತ ನಾದ ಗೋವಿಂದನ ಬಿಳಗಿ ಸಮೀಪ ಇಳಿದುಕೊಂಡು ಹೋಗಿದ್ದು  ಆರೋಪಿತ ರಾಮಪ್ಪ ಈತನು ಕಲ್ಕಣಿ  ಮಹಾಸತಿ ದೇವಸ್ಥಾನದ ಹತ್ತಿರ ಸಿಕ್ಕಿದ್ದು ಆರೋಪಿತನ ಮೇಲೆ ಸಿದ್ದಾಪುರ ಪೊಲೀಸ್ ಠಾಣೆ  ಪ್ರಕರಣ ದಾಖಲಾಗಿರುತ್ತದೆ.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button