Follow Us On

WhatsApp Group
Big News
Trending

ಕಾಲೇಜು ಹತ್ತಿರವೇ ಬಾಂಬ್ ಸದ್ದು; ಪಪ್ಪಾ ಭಯ ಆಗ್ತಾ ಇದೆ. ಅಪ್ಪಾ ನನ್ನ ಹೇಗಾದರು ಮಾಡಿ ವಾಪಸ್ ಕರಿಸಿಕೊಳ್ಳಿ

ರಷ್ಯಾ ಉಕ್ರೇನ್ ನಡುವಿನ ಯುದ್ಧದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿ ಆತಂಕಕ್ಕೊಳಗಾಗಿರುವ ವಿದ್ಯಾರ್ಥಿನಿ ಸ್ನೇಹಾ ಹೊಸಮನಿ ತಂದೆಗೆ ವಿಡಿಯೋ ಕಾಲ್ ಮಾಡಿ ತಮ್ಮನ್ನು ವಾಪಸ್ಸ್ ಕರೆಸಿಕೊಳ್ಳುವಂತೆ ಅಳಲು ತೋಡಿಕೊಂಡಿರುವ ಘಟನೆ ನಡೆದಿದೆ. ಮುಂಡಗೋಡ ಮೂಲದ ದಲಿತ ಸಂಘರ್ಷ ಸಮಿತಿ ತಾಲ್ಲೂಕಾ ಅಧ್ಯಕ್ಷ ಪಕೀರಪ್ಪ ಹೊಸಮನಿ ಪುತ್ರಿ ಉಕ್ರೇನ್ ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ರಷ್ಯಾ ಉಕ್ರೇನ್ ನಡುವಿನ ಯುದ್ಧದಿಂದಾಗಿ ಆತಂಕಕ್ಕೊಳಗಾಗಿದ್ದಾರೆ.

ಭಾರತಕ್ಕೆ ಮರಳಲು ಸಾಧ್ಯವಾಗದೇ ಉಕ್ರೇನ್ ನಲ್ಲಿ ನೆಲೆಸಿರುವ ಸ್ನೇಹ ವಿಡಿಯೋ ಕಾಲ್ ಮೂಲಕ ಪರಿಸ್ಥಿತಿ ವಿವರಿಸಿದ್ದಾಳೆ. ಕಾಲೇಜು ಹತ್ತಿರವೇ ಬಾಂಬ್ ಸ್ಪೋಟ ಆಗುತ್ತಿದ್ದು, ಪಪ್ಪಾ ಭಯಾ ಆಗುತ್ತಿದೆ. ಏನು ಮಾಡಬೇಕು ಎಂಬುದು ಗೊತ್ತಾಗ್ತಾ ಇಲ್ಲ. ಸದ್ಯಕ್ಕೆ ರೂಂನಲ್ಲೆ ಇದೀವಿ, ಇಲ್ಲಿ ಹೊರಗೆ ಬರಬೇಡಿ, ಸೇಪ್ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾಳೆ.

ಬಂಕರ್ನಲ್ಲಿ ಇದ್ವಿ ಅಲ್ಲಿ ಉಸಿರಾಟಕ್ಕೆ ತೊಂದರೆ ಆಯಿತು ಮತ್ತೆ ರೂಂಗೆ ಬಂದಿದ್ದೆವೆ. ಪಪ್ಪಾ ಭಯ ಆಗ್ತಾ ಇದೆ. ಅಪ್ಪಾ ನನ್ನ ಹೇಗಾದರು ಮಾಡಿ ವಾಪಾಸ್ ಕರಿಸಿಕೊಳ್ಳಿ ಎಂದು ಅಳಲು ತೋಡಿಕೊಂಡಿದ್ದು, ಮಗಳ ಪರಿಸ್ಥಿತಿ ಕಂಡು ಇದೀಗ ಪಾಲಕರು ಭಯಗೊಂಡಿದ್ದು ಮಗಳನ್ನು ಕರೆತರಲು ಕ್ರಮ ಕೈಗೊಳ್ಳುವಂತೆ ಪಾಲಕರು ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button