Follow Us On

WhatsApp Group
Important
Trending

ಬಸ್ ನ ಕಿಟಕಿಯಲ್ಲಿ ಕೈ ಹೊರಹಾಕಿದ್ದ ವೃದ್ಧ: ಲಾರಿಗೆ ಬಡಿದು ಕೈ ಕಟ್

ಕಾರವಾರ : ಚಲಿಸುತ್ತಿರುವ ಬಸ್ ಕಿಟಕಿಯಿಂದ ಕೈ ಹೊರ ಹಾಕಿ ಪ್ರಯಾಣಿಸುತ್ತಿದ್ದ ವೃದ್ದನ ಕೈ ಲಾರಿಗೆ ತಾಗಿ ತುಂಡುವರಿದಿರುವ ಘಟನೆ ತಾಲೂಕಿನ ಕದ್ರಾದಲ್ಲಿ ನಡೆದಿದೆ. ಪ್ರತಿದಿನ ಅಂಕೋಲಾದಿoದ ಬೆಳಗಾವಿಗೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್, ಕದ್ರಾ ಬಸ್ ನಿಲ್ದಾಣಕ್ಕೆ ಹೋಗಿ ವಾಪಸ್ಸಾಗುವ ಸಂಧರ್ಭದಲ್ಲಿ ಕೆಪಿಸಿ ಕಾಲೊನಿ ಸಮೀಪ ಈ ಘಟನೆ ಸಂಭವಿಸಿದೆ.

ಬಸ್ ಹಿಂಭಾಗದ ಸೀಟ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಅಣಸಿ ಮೂಲದ ವೃದ್ದ ಲಕ್ಷ್ಮಣ ಪಾಂಗ್ಳೊ ಕಾಜುಗಾರ (75) ತನ್ನ ಕೈಯನ್ನು ಕಿಟಕಿಯಿಂದ ಹಪರ ಹಾಕಿ ಪ್ರಯಾಣಿಸುತ್ತಿದ್ದರು. ಈ ವೇಳೆ ಓವರ್ ಟೇಕ್ ಮಾಡುವಾಗ, ಲಾರಿಯೊಂದು ಕಿಟಕಿಯಿಂದ ಹೊರಚಾಚಿದ್ದ ವೃದ್ಧನ ಕೈಗೆ ಬಡಿದಿದೆ. ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button