Follow Us On

WhatsApp Group
Focus News
Trending

ದೊಡ್ಡಪ್ಪನ ಮಗನೊಂದಿಗೆ ಸಮುದ್ರಕ್ಕೆ ಈಜಾಡಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ನೀರುಪಾಲು

ಭಟ್ಕಳ: ತನ್ನ ದೊಡ್ಡಪ್ಪನ ಮಗನೊಂದಿಗೆ ಸಮುದ್ರಕ್ಕೆ ಈಜಾಡಲು ತೆರಳಿದ ಯುವಕನೋರ್ವ ಆಯತಪ್ಪಿ ನೀರಿನಲ್ಲಿ ಮುಳುಗಿ ನೀರುಪಾಲಾಗಿರುವ ಘಟನೆ ತಾಲೂಕಿನ ಬೆಳಕೆ ಮೊಗೇರಕೇರಿಯಲ್ಲಿ ನಡೆದಿದೆ.

ಸಮುದ್ರದಲ್ಲಿ ಕಣ್ಮರೆಯಾಗಿರುವ ಬಾಲಕ ಮುರುಡೇಶ್ವರ ಆರೆನ್ನೆಸ್ ಹೈಸ್ಕೂಲ್‌ನ 10ನೇ ತರಗತಿಯ ವಿದ್ಯಾರ್ಥಿ, ಬೆಳಕೆಯ ನಿವಾಸಿ ಶಶಾಂಕ ಮಾದೇವ ಮೊಗೇರ (16)ಎಂದು ಗುರುತಿಸಲಾಗಿದೆ.

ಸಹಾಯಕ ಆಯುಕ್ತರ ಕಚೇರಿಯ ಮುಂದೆ ನಡೆಯುತ್ತಿರುವ ಮೊಗೇರ ಸಮುದಾಯದ ಧರಣಿಯಲ್ಲಿ ಪಾಲ್ಗೊಂಡಿದ್ದ ಈತ,
ಧರಣಿ ಮುಗಿಯುವ ಮುನ್ನವೇ ಆಟೋ ರಿಕ್ಷಾದಲ್ಲಿ
ಮನೆಯನ್ನು ಸೇರಿಕೊಂಡಿದ್ದು, ನಂತರ ತನ್ನ ದೊಡ್ಡಪ್ಪನ ಮಗನೊಂದಿಗೆ ಸಂಜೆ 4.30 ಸುಮಾರಿಗೆ ಈಜಾಡಲು ತೆರಳಿದ್ದ ಎಂದು ತಿಳಿದುಬಂದಿದೆ.

ಮೀನುಗಾರಿಕಾ ದೋಣಿ, ಬಲೆಯನ್ನು ಬಳಸಿ ಶವಕ್ಕಾಗಿ ಶೋಧ ಕಾರ್ಯ ನಡೆಸಲಾಯಿತಾದರೂ ಪ್ರಯತ್ನ ಫಲಕಾರಿಯಾಗಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ವಿಸ್ಮಯ ನ್ಯೂಸ್ ಭಟ್ಕಳ

Back to top button