Important
Trending

ಮೇಲ್ಛಾವಣಿ ಮೂಲಕ ಮನೆ ಪ್ರವೇಶಿಸಿ ಚಿನ್ನಾಭರಣ ಕಳ್ಳತನ: ಮಹಿಳೆಯ ಬಂಧನ

ಮುರ್ಡೇಶ್ವರ: ಕಳೆದ ಎಪ್ರಿಲ್ 25 ರಂದು ಮುರುಡೇಶ್ವರ ಕಾಯ್ಕಿಣಿ ಮಠದಹಿತ್ಲುವಿನಲ್ಲಿ ನಡೆದ ಮನೆ ಕಳ್ಳತನಕ್ಕೆ ಸಂಬAಧಿಸಿದAತೆ ಮಹಿಳೆಯೋರ್ವಳನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆ ಕುಸುಮಾ ವೆಂಕಟರಮಣ ಮೊಗೇರ ಎಂದು ತಿಳಿದು ಬಂದಿದೆ. ಈಕೆ ಕಳೆದ ಏ25 ರಾತ್ರಿಯಿಂದ ಏ26ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ದುರ್ಗಮ್ಮ ಜಟ್ಟಾ ಮೊಗೇರ ಎನ್ನುವವರ ಮನೆಯ ಮೇಲ್ಚಾವಣಿಯಿಂದ ಮನೆಯ ಒಳಗಡೆ ಹೋಗಿ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟಿದ್ದ ಗೋದ್ರೆಜ ಕಪಾಟನ ಚಾವಿ ಉಪಯೋಗಿಸಿ ಗೋದ್ರೆಜ ಕಪಾಟ್ ತೆರೆದು ಕಪಾಟಿನಲ್ಲಿದ್ದ 1,17,500 ರೂಪಾಯಿ ಮೌಲ್ಯದ 47 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 25 ಸಾವಿರ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಳು.

ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ದುರ್ಗಮ್ಮ ಜಟ್ಟಾ ಮೊಗೇರ ಎನ್ನುವವರು ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಮುರುಡೇಶ್ವರ ಪೊಲೀಸರು ತನಿಖೆ ಕೈಗೊಂಡು ಖಚಿತ ಮಾಹಿತಿ ಮೇರೆಗೆ ಮಂಕಿಯ ಕೊಪ್ಪದಮಕ್ಕಿಯ ಕುಸುಮಾ ವೆಂಕಟರಮಣ ಮೊಗೇರ ಎನ್ನುವ ಮಹಿಳೆಯನ್ನು ಬಂಧಿಸಿ 47 ಗ್ರಾಂ ತೂಕದ ಬಂಗಾರದ ಆಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button