Follow Us On

WhatsApp Group
Important
Trending

ಕಾಲು ಜಾರಿ ಹಳ್ಳದಲ್ಲಿ ಬಿದ್ದು ಮೃತಪಟ್ಟ ರೈತ : ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹಾರಿ ಹೋದ ಪ್ರಾಣ ಪಕ್ಷಿ

ಅಂಕೋಲಾ:  ತನ್ನ ಗದ್ದೆ (ಜಮೀನಿಗೆ) ಹೋಗುತ್ತಿದ್ದ ರೈತನೊಬ್ಬ ಕಾಲುಜಾರಿ ಆಯತಪ್ಪಿ  ಹಳ್ಳದಲ್ಲಿ ಬಿದ್ದು , ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.  ತಾಲೂಕಿನ ಕಸಬಾ ಕೇಣಿಯ ಗಾಂವಕರವಾಡದ ಸುರೇಶ ವಿಠಲ ಗಾಂವಕರ (58) ಮೃತ ದುರ್ದೈವಿಯಾಗಿದ್ದಾನೆ .

ರೈತಾಭಿ ಕೆಲಸ ಮಾಡಿಕೊಂಡಿದ್ದ ಈತ ಮೇ 22 ರಂದು ಬೆಳಿಗ್ಗೆ 6.30ರಿಂದ   7.30 ರ ನಡುವಿನ ಅವಧಿಯಲ್ಲಿ ತನ್ನ ಗದ್ದೆಗೆ ಹೋಗುತ್ತಿರಬೇಕಾದರೆ ಕೇಣಿ ಹಳ್ಳದಲ್ಲಿ ಜಾರಿಬಿದ್ದ ,ಆತನನ್ನು ಉಪಚಾರಕ್ಕಾಗಿ ತಾಲೂಕ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದ್ದು ಈ ಕುರಿತು ಮೃತನ ಸಹೋದರ ದಿನಕರ ಗಾಂವಕರ ನೀಡಿದ ದೂರಿನನ್ವಯ,ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕಾಲಿಕವಾಗಿ ಮನೆಯ  ಯಜಮಾನನನ್ನು ಕಳೆದುಕೊಂಡ ಬಡ ಕುಟುಂಬದಲ್ಲಿ ಮೃತನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ರೋದಿಸುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ

Back to top button