Follow Us On

WhatsApp Group
Important
Trending

ಬಸ್ ತಂಗುದಾಣದ ಬಳಿ ಕುಸಿದುಬಿದ್ದ ವ್ಯಕ್ತಿ: ಪಾರ್ಶ್ವವಾಯು ಪೀಡಿತನ ದುರ್ಮರಣ        

ಅಂಕೋಲಾ: ಪಕ್ಕದ ರಾಜ್ಯದಿಂದ ಅಂಕೋಲಾ ಗ್ರಾಮೀಣ ಪ್ರದೇಶವೊಂದರ  ಬಸ್ (ಪ್ರಯಾಣಿಕರ ) ತಂಗುದಾಣದ ಬಳಿ ಆಕಸ್ಮಿಕವಾಗಿ  ಕುಸಿದುಬಿದ್ದು, ನಂತರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ  ನಡೆದಿದೆ.  ಗೋವಾ ರಾಜ್ಯದ ವಾಸ್ಕೋ ನಿವಾಸಿ  ರಾಜೇಂದ್ರ ಮಹಾಬಲು ಸಾವಂತ(53) ಮೃತ ದುರ್ದೈವಿಯಾಗಿದ್ದು, ಕಳೆದ  ಕೆಲ ವರ್ಷಗಳಿಂದ ಪಾರ್ಶ್ವವಾಯು  ರೋಗಕ್ಕೆ ತುತ್ತಾಗಿದ್ದ ಇವರು ಆಗಾಗ ಬೆಳಂಬಾರಕ್ಕೆ ಬಂದು ಇಲ್ಲಿಯ ಆಯುರ್ವೇದ ಗಿಡ ಮೂಲಿಕೆ  ಚಿಕಿತ್ಸೆ ಪಡೆದು/ಇಲ್ಲವೇ ಔಷಧಿ ಓಯತ್ಯುತ್ತಿದ್ದರು ಎನ್ನಲಾಗಿದೆ.

ಮಂಗಳವಾರ ಚಿಕತ್ಸೆ ಪಡೆಯಲು ಅಥವಾ ಬೇರೆ ಯಾವುದೋ ಕಾರಣದಿಂದ  ಬೆಳಂಬಾರಕ್ಕೆ ಬಂದಿದ್ದ ಅವರು  ಹತ್ತಿರದಲ್ಲೇ ಇದ್ದ ಬಸ್ (ಪ್ರಯಾಣಿಕರ ) ತಂಗುದಾಣದಲ್ಲಿ  ನಿಂತಿದ್ದ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದರು ಎನ್ನಲಾಗಿದೆ. ಬಳಿಕ ಅವರನ್ನು ಹೆಚ್ಚಿನ  ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಫಲಕಾರಿಯಾಗದೇ ಮೃತಪಟ್ಟಿದ್ದು , ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button