Important
Trending

ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ: ಬಸ್ ನಿಲ್ಲಿಸುವಷ್ಟರಲ್ಲಿ ಸಾವು: ಪ್ರಯಾಣಿಕರ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ

ಮುಂಡಗೋಡು: ಯಲ್ಲಾಪುರದಿಂದ ಮುಂಡಗೋಡಿಗೆ ಬರುತ್ತಿದ್ದ ಬಸ್ ಚಾಲಕ ಹೃದಯಾಘಾತದಿಂದ ಸಾನ್ನಪ್ಪಿದ್ದು, ಆದರೆ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಹೃದಯಾಘಾತವಾದರೂ ಪ್ರಯಾಣಿಕರ ಜೀವ ಉಳಿಸಿ, ಮಾದರಿಯಾಗಿದ್ದಾರೆ. ಬಸ್ ಚಲಿಸುತ್ತಿರುವುವಾಗಲೇ ಎದೆನೋವು ಕಾಣಿಸಿಕೊಂಡಿದೆ.

ಬಸ್ ಚಲಿಸುತ್ತಿರುವುವಾಗಲೇ ಎದೆನೋವು ಕಾಣಿಸಿಕೊಂಡಿದ್ದು, ಈ ವೇಳೆ ಬಸ್ ಅನ್ನು ನಿಧಾನಮಾಡಿದ್ದಾನೆ. ಆದರೆ, ಬಸ್ ನಿಲ್ಲಿಸುವಷ್ಟರಲ್ಲಿ ಅಲ್ಲೇ ಮೃತಪಟ್ಟಿದ್ದಾನೆ. ಮೃತನನ್ನು ಮಲ್ಲಪ್ಪ ಸೋಮಪ್ಪನವರ್ ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಬಸ್ ನಲ್ಲಿ ಇದ್ದವರು ಕೆಲಕಾಲ ಆತಂಕಗೊoಡಿದ್ದರು.

ವಿಸ್ಮಯ ನ್ಯೂಸ್, ಕಾರವಾರ

Back to top button