Follow Us On

WhatsApp Group
Important
Trending

ಅಪಹರಣಕ್ಕೊಳಗಾಗಿದ್ದಾಳೆ ಎಂದ ಯುವತಿ ವಿವಾಹಿತೆಯಾಗಿ ಗಂಡನೊಂದಿಗೆ ಪ್ರತ್ಯಕ್ಷ: ಕುಟುಂಬದವರ ವಿರುದ್ಧ ಹೇಳಿದ್ದೇನು? ಯುವತಿ ಹೇಳಿದ ಮ್ಯಾರೇಜ್ ಸ್ಟೋರಿ ನೋಡಿ

ಕುಮಟಾ: ಕೆಲ‌ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಯುವತಿ ಪ್ರತ್ಯಕ್ಷವಾಗಿದ್ದಾಳೆ. ಆದರೆ ಪ್ರಕರಣಕ್ಕೊಂದು ಟ್ಟಿಸ್ಟ್ ಸಿಕ್ಕಿದ್ದು, ವಿವಾಹದೊಂದಿಗೆ ಪ್ರತ್ಯಕ್ಷವಾಗಿದ್ದಾಳೆ. ಹುಲೇಕಲ್ ನಿವಾಸಿ ಎಲ್‌ಐಸಿ ಏಜೆಂಟ್ ಸುಬ್ರಹ್ಮಣ್ಯ ಮಂಜುನಾಥ ಭಂಡಾರಿ ಅವರನ್ನು ತನ್ನ ಸ್ವಇಚ್ಛೆಯಿಂದಲೇ ಮದುವೆಯಾಗಿರುವುದಾಗಿ ಯುವತಿ ತಿಳಿಸಿದ್ದಾಳೆ.

ಧಾರವಾಡದ ದೇವಸ್ಥಾನದಲ್ಲಿ ವಿವಾಹವಾದ ದಾಖಲೆಯನ್ನು ಪೊಲೀಸರಿಗೆ ನೀಡಿದ ಕಾಮಾಕ್ಷಿ ಅವರು, ನನ್ನನ್ನು ಯಾರು ಅಪಹರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಅಲ್ಲದೆ, ನನ್ನ ಪ್ರಿಯಕರನನ್ನು ಕೋಡ್ಕಣಿಗೆ ಕರೆಯಿಸಿಕೊಂಡು, ಸ್ವಇಚ್ಛೆಯಿಂದಲೇ ಅವರ ಜೊತೆಗೆ ಧಾರವಾಡಕ್ಕೆ ತೆರಳಿ ವಿವಾಹವಾಗಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ.

ಜೂನ್ 1 ರಂದು ಕುಮಟಾ ಪೊಲೀಸ್ ಠಾಣೆಯ ಶಿರಸಿಯ ಹುಲೇಕಲ್ ನಿವಾಸಿ ಕಾಮಾಕ್ಷಿ ಪೈ ಎಂಬ ಯುವತಿಯನ್ನು ಅಪಹರಣ ಮಾಡಲಾಗಿದೆ ಎಂದು ಯುವತಿಯ ಸಂಬಂಧಿ, ಕೋಡ್ಕಣಿಯ ನಿವಾಸಿಯೊಬ್ಬರು ದೂರು ದಾಖಲಿಸಿದ್ದರು.

ನನ್ನ ಪತಿಯ ವಿರುದ್ಧ ಸುಳ್ಳು ಅಪಹರಣ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೊಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ವಿಸ್ಮಯ ನ್ಯೂಸ್ ಕುಮಟಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button