Follow Us On

WhatsApp Group
Important
Trending

ಯುವಮೋರ್ಚಾ ಹೊನ್ನಾವರ ಮಂಡಲದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕಿನ ಯುವಸಾಧಕರಿಗೆ ಸನ್ಮಾನ

ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀಯವರ ಎಂಟು ವರ್ಷದ ಆಡಳಿತದ ಸೇವೆ, ಸುಶಾಸನ ಹಾಗೂ ಬಡವರ ಕಲ್ಯಾಣದಡಿಯ ಯುವಸಂಪರ್ಕ ಅಭಿಯಾನದ ಅಂಗವಾಗಿ ಯುವಮೋರ್ಚಾ ಹೊನ್ನಾವರ ಮಂಡಲದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕಿನ ಯುವಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಾ ಯುವಮೋರ್ಚಾ ಅಧ್ಯಕ್ಷರಾದ ಸಚಿನ್ ಶೇಟ್ , ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಶ್ರೀ ಶ್ರೀಧರ ನಾಯ್ಕ , ತಾಲೂಕಾ ಪ್ರಧಾನಕಾರ್ಯದರ್ಶಿಗಳಾದ ಕೃಷ್ಣ ಜೋಶಿ , ಕೇಶವ ಗೌಡ ಹಾಗೂ ಯುವಮೋರ್ಚಾ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಈ ವೇ:ಎ ಅಂತರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ತಮ್ಮ ನಿರ್ದೇಶನದ ನಾಸ್ತಿ ಕಿರುಚಿತ್ರಕ್ಕೆ ಪ್ರಶಸ್ತಿ ಪಡೆದ ಯುವ ರಂಗಕರ್ಮಿ, ಚಿತ್ರನಟ ಶ್ರೀ ಎಮ್ . ಎಚ್ . ಗಣೇಶ್ ಹಾಗೂ ರಾಷ್ಟ್ರಮಟ್ಟದ ಜ್ಯೋತಿಷ್ಯ ಭಾಷಣದಲ್ಲಿ ದ್ವಿತಿಯ ಬಹುಮಾನ ಪಡೆದ ಶ್ರೀ ಗಜಾನನ ಭಟ್ ಕರ್ಕಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button