Follow Us On

Google News
Important
Trending

ಮಹಾರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಕೈ ಹಾಕಿಲ್ಲ; ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರ: ಮಹಾರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಕೈ ಹಾಕಿಲ್ಲ. ಶಿವಸೇನೆ ಅಧಿಕಾರಕ್ಕೊಸ್ಕರ ಠಾಕ್ರೆ  ಪುತ್ರ ಯಾವ ರೀತಿ ಅನಾಹುತ ಮಾಡಿದ್ದಾರೆಂಬುದು ಇದೀಗ ಜಗತ್ತಿಗೆ ಗೊತ್ತಾಗಿದೆ ಎಂದು ಸಚಿವ ಕೋಟ  ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಾರವಾರದಲ್ಲಿ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಿವಸೇನೆ ಯಾವ ಮಾನದಂಡವನ್ನು ಇಟ್ಕೊಂಡು ಮೈತ್ರಿ ಮಾಡಿಕೊಂಡರೋ ಗೊತ್ತಿಲ್ಲ. ಆದರೆ ಇದೀಗ ತಮಗೆ ಬಿಜೆಪಿ ಒಂದೇ ಸಮನ್ವಯ ಹೊಂದಿದ್ದಾರೆಂದು ಶಿಂಧೆ ಹೇಳಿದ್ದಾರೆ. ಮೈತ್ರಿ ಗೊಂದಲದಿಂದ ಈ ರೀತಿ ಮಹಾರಾಷ್ಟ್ರದಲ್ಲಿ ಬೆಳವಣಿಗೆಗಳಾಗಿವೆ. ಬಿಜೆಪಿ ಜೊತೆ ಕೈ ಜೋಡಿಸಿದರೇ  ಸೂಕ್ತ  ಎಂದು ನಿರ್ಧಾರ ತೆಗೆದುಕೊಂಡಿದೆ. ಆರೋಗ್ಯಕರ ವಾತಾವರಣಕ್ಕೆ ನಮ್ಮವರು ಕೂಡ ಬೆಂಬಲ ನೀಡುತ್ತಿದ್ದಾರೆ ಎಂದರು.

ಮಾಜಿ ಡಿಸಿಎಂ ಪರಮೇಶ್ವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಬಿಜೆಪಿ ಮಾಡಿಲ್ಲ. ಸಿಂಧೆಯವರು ಆಡಳಿತಾತ್ಮಕ, ಭಾವನಾತ್ಮಕ ಮತ್ತು ವೈಚಾರಿಕ ವಿಚಾರಕ್ಕೆ ಶಕ್ತಿ ಬರುತ್ತೆ ಎಂಬ ಕಾರಣಕ್ಕೆ ಬಂಡಾಯ ಎದ್ದು ಬಂದಿದ್ದಾರೆ ಎಂದು ಹೇಳಿದರು.

ವಿಸ್ಮಯ ನ್ಯೂಸ್ ಕಾರವಾರ

Back to top button