![](http://i0.wp.com/vismaya24x7.com/wp-content/uploads/2022/06/death-3.jpg?fit=1280%2C960&ssl=1)
ಕುಮಟಾ: ಪ್ರವಾಸಕ್ಕೆ ಬಂದು ಸಮುದ್ರಕ್ಕಿಳಿದ ನಾಲ್ವರು ನೀರು ಪಾಲಾದ ಘಟನೆ ತಾಲೂಕಿನ ಬಾಡದಲ್ಲಿ ನಡೆದಿದೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ©Copyright reserved by Vismaya 24×7
ಚೈತಶ್ರಿ ಮತ್ತು ಅರ್ಜುನ್ ಮೃತಪಟ್ಟಿದ್ದು,ಮೃತ ದೇಹ ಪತ್ತೆಯಾಗಿದೆ. ಕಿರಣ್ ಕುಮಾರ ಡಿ, ತೇಜಸ್ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಬೆಂಗಳೂರಿನಿoದ 80 ಜನ ವಿದ್ಯಾರ್ಥಿಗಳ ತಂಡ ಕುಮಟಾದ ಬಾಡದಲ್ಲಿರುವ ಖಾಸಗಿ ರೆಸಾರ್ಟ್ ಬಂದಿದ್ದು, ಈ ವೇಳೆ ಸಮುದ್ರಕ್ಕಿಳಿದು ಆಟವಾಡುವಾಗ ಅಲೆಯ ರಭಸಕ್ಕೆ ದುರಂತ ನಡೆದಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದು, ಶೋಧಕಾರ್ಯ ನಡೆಸುತ್ತಿದ್ದಾರೆ.
![](http://i0.wp.com/vismaya24x7.com/wp-content/uploads/2022/06/kumta-death.jpg?resize=708%2C531&ssl=1)
ವಿಸ್ಮಯ ನ್ಯೂಸ್, ಕುಮಟಾ