Join Our

WhatsApp Group
Important
Trending

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಒಂಬತ್ತು ಜನರಿಗೆ ಗಾಯ

ಅತಿ ವೇಗ ಹಾಗೂ ನಿರ್ಲಕ್ಷತನದಿಂದ ವಾಹನ ಚಾಲನೆ

ಸಿದ್ದಾಪುರ: ಓಮಿನಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂಬತ್ತು ಜನ ಗಾಯಗೊಂಡ ಘಟನೆ ಸಿದ್ದಾಪುರ-ಮಾವಿನಗುಂಡಿ ರಸ್ತೆಯ ಪಡವನಬೈಲ್ ಬಳಿ ನಡೆದಿದೆ.

ಮಾವಿನಗುಂಡಿ ಕಡೆಯಿಂದ ಸಿದ್ದಾಪುರಕ್ಕೆ ಬರುತ್ತಿದ್ದ ಓಮಿನಿ, ಎದುರಿನಿಂದ ಬಂದ ಓಮಿನಿಗೆ ಡಿಕ್ಕಿ ಹೊಡೆದ ಪರಿಣಾಮ ಗಿರೀಶ ಮಡಿವಾಳ ಕಾತೂರ, ಅಬ್ಬಾಸ್ ಸಾಬ್ ಮಳಗಿ, ಮಲ್ಲಿಕ್ ಜಾನ್ ಕಾತೂರ, ರವೀಂದ್ರ ಕಾತೂರ, ಶೇರಖಾನ್ ಮಳಗಿ, ಮುಬಾರಕ ಮಳಗಿ, ಜೈನುಬಿ ಆರೇಕೊಪ್ಲ ಶಿರಸಿ ಇವರು ಗಾಯಗೊಂಡಿದ್ದಾರೆ.

ಅತಿ ವೇಗ ಹಾಗೂ ನಿರ್ಲಕ್ಷತನದಿಂದ ವಾಹನ ಚಲಾಯಿಸಿದ ಓಮಿನಿ ಚಾಲಕ ಸಿದ್ದಾಪುರ ಹೊಸೂರಿನ ಶ್ರೀಪಾದ ನಾರಾಯಣ ಭಟ್ ಕೂಡ ಗಾಯಗೊಂಡಿದ್ದು, ಈ ಕುರಿತು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ದಿವಾಕರ ನಾಯ್ಕ ಸಂಪಖಂಡ

Back to top button