![](http://i0.wp.com/vismaya24x7.com/wp-content/uploads/2022/08/car-accident.jpg?fit=1200%2C720&ssl=1)
ಸಿದ್ದಾಪುರ: ಶಿರಸಿ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಕಾರಿಗೆ ತಾಲೂಕಿನ ಹೆಗ್ಗೋಡು ಮನೆ ಬಳಿ ರಸ್ತೆಗೆ ಆಕಳೊಂದು ಅಡ್ಡ ಬಂದಿದ್ದು, ಆಕಳನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಕಾರು ಬಿದ್ದಿದೆ. ಪರಿಣಾಮ ಸವಾರರಿಗೆ ಗಾಯಗಳಾಗಿದೆ. ಘಟನೆ ಕುರಿತು ಪ್ರತ್ಯಕ್ಷ ದರ್ಶಿ ಗಳು ವಿಸ್ಮಯ ಟಿ.ವಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ 108 ವಾಹನ ದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡ ಅವರನ್ನು ತಕ್ಷಣ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಕೇಳಿ ಬಂದಿವೆ.
![](http://i0.wp.com/vismaya24x7.com/wp-content/uploads/2022/08/car-accident-1.jpg?resize=708%2C531&ssl=1)
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ