ಜಲಪಾತ ವೀಕ್ಷಿಸಲು ಹೋದ ಪ್ರವಾಸಿಗ ನಾಪತ್ತೆ| ಹೊಳೆಯಲ್ಲಿ ತೇಲಿಹೋದ ವ್ಯಕ್ತಿ

ಸಿದ್ದಾಪುರ: ಜಲಪಾತ ವೀಕ್ಷಿಸಲು ಬಂದ ಪ್ರವಾಸಿಗನೋರ್ವ ಹೊಳೆಯಲ್ಲಿ ತೇಲಿಹೋಗಿ ನಾಪತ್ತೆಯಾದ ಘಟನೆ ತಾಲೂಕಿನ ಹೆಗ್ಗರಣಿ ಸಮೀಪದ ಹುಕ್ಕಳಿ ಬಳಿಯ ಹುಂಡಿಗದ್ದೆ ಯಲ್ಲಿ ನಡೆದಿದೆ. ಜಲಪಾತ ವೀಕ್ಷಣೆಗೆ ಮೈಸೂರು, ಬೆಂಗಳೂರು, ಕೋಲಾರ ಮೂಲದ ಒಟ್ಟು 13 ಜನ ಪ್ರವಾಸಿಗರು ಹಾರ್ಸಿಕಟ್ಟಾ ದ ವಿನಾಯಕ ರಾಜಾರಾಮ್ ಹೆಗಡೆ ಇವರೊಂದಿಗೆ ಹುಂಡಿಗದ್ದೆ ಜಲಪಾತ ವೀಕ್ಷಣೆಗೆ ಹೋಗಿದ್ದರು.

ಕತ್ತಲಲ್ಲಿ  ಕೈ ಚಳಕ ತೋರಿಸಲು ಹೋದ ಪೋಲಿ ಹುಡುಗನಿಗೆ ಬಿತ್ತೇ ಕೈ ಕೋಳ ? ಬಸ್ಸಿನಲ್ಲಿ ಬಂದಿದ್ದ  ಯುವತಿಯೊಂದಿಗೆ ತೋರಿದನೇ  ಅನುಚಿತ ವರ್ತನೆ

ಈ ವೇಳೆ 32 ವರ್ಷದ ಕೋಲಾರ ಮೂಲದ ರಾಘವೇಂದ್ರ ಗೌಡ, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುತ್ತಾನೆ. ಶವ ಪತ್ತೆ ಕಾರ್ಯ ಮುಂದುವರೆದಿದ್ದು ಕುಮಟಾ ಪೊಲೀಸ್ ಠಾಣೆಗೆ ಕೂಡ ಮಾಹಿತಿ ನೀಡಲಾಗಿದೆ.

ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಸ್ಥಳೀಯರೊಂದಿಗೆ ಶೋಧ ಕಾರ್ಯ ನಡೆಸಿದ್ದು, ವಿಪರೀತವಾಗಿ ಸುರಿಯುತ್ತಿರುವ ಮಳೆ ಹಾಗೂ ಕತ್ತಲೆಯಾದ ಹಿನ್ನೆಲೆ ಶೋಧ ಕಾರ್ಯ ನಿಲ್ಲಿಸಿದ್ದಾರೆ. ರವಿವಾರ ಮತ್ತೆ ಶೋಧ ಕಾರ್ಯ ಮುಂದುವರೆಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ, ಸಿದ್ದಾಪುರ

land for sale
Exit mobile version