Important
Trending

ಮನೆಯ ಮುಂದಿನ ರಸ್ತೆ ತಿರುವಿನಲ್ಲಿ ನಿಲ್ಲಿಸಿಟ್ಟ ಜನರೇಟರ್‌ಗೆ ಡಿಕ್ಕಿ : ಅಪಘಾತದಿಂದ ಬೈಕ್ ಸವಾರ ಸ್ಥಳದಲ್ಲೇ ಸಾವು

ಭಟ್ಕಳ: ಯಾವುದೇ ಮುಂಜಾಗ್ರತಿ ಹಾಗೂ ಸುರಕ್ಷತ ಕ್ರಮವಿಲ್ಲದೆ ಮನೆಯ ಮುಂದಿನ ರಸ್ತೆ ತಿರುವಿನಲ್ಲಿ ನಿಲ್ಲಿಸಿಟ್ಟ ಜನರೇಟರ್‌ಗೆ ಬೈಕ್ ಸವಾರ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಟಖಂಡ ಮಾರುಕೇರಿ ರಸ್ತೆಯಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ರಾಘು ಸಣ್ಣು ಗೊಂಡ ಎಂದು ಗುರುತಿಸಲಾಗಿದೆ. ನಾಗೇಶ ಹೆಬ್ಬಾರ್ ಮಾಲೀಕತ್ವದ ದೊಡ್ಡದಾದ ಜನರೇಟರ್ ಮನೆಯ ಎದುರಿನ ಕೋಟಖಂಡ ರಸ್ತೆಯ ತಿರುವಿನಲ್ಲಿ ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ಅಳವಡಿಸದೆ ರಸ್ತೆಗೆ ತಾಗಿಕೊಂಡು ನಿರ್ಲಕ್ಷ್ಯತನದಿಂದ ನಿಲ್ಲಿಸಿಡಲಾಗಿತ್ತು ಎನ್ನಲಾಗಿದೆ.

RWF Recruitment 2023: ರೈಲ್ವೆ ನೇಮಕಾತಿ: 192 ಹುದ್ದೆಗಳಿಗೆ ಅಧಿಸೂಚನೆ: SSLC ಆದವರು ಅರ್ಜಿ ಸಲ್ಲಿಸಬಹುದು

ಜನರೇಟರ್ ಹಿಂಬಾಗ ಹಾಗೂ ಮುಂಭಾಗದಲ್ಲಿ ಯಾವುದೇ ರಿಪ್ಲೇಕ್ಟರ್ ಅಳವಡಿಸದೆ ಇರುವುದರಿಂದ ಮಾರುಕೇರಿಯಿಂದ ಕೋಟಖಂಡ ಕಡೆಗೆ ಬಜಾಜ್ ಪಲ್ಸರ್ ಬೈಕ್ ನಲ್ಲಿ ಬರುತ್ತಿದ್ದ ರಾಘು ಸಣ್ಣು ಗೊಂಡ ಈತನು ನಾಗೇಶ ಹೆಬ್ಬಾರ್ ಮನೆಯ ಎದುರಿನ ಮಾರುಕೇರಿ ಕೋಟಖಂಡ ರಸ್ತೆ ತಿರುವಿನಲ್ಲಿ ದೊಡ್ಡದಾದ ಜನರೇಟ್ ರಗೆ ಹಿಂದಿನಿoದ ಡಿಕ್ಕಿ ಹೊಡೆದು ಅಪಘಾತವಾಗಿ ಬೈಕ್ ಸಮೇತ ರಸ್ತೆ ಮೇಲೆ ಬಿದ್ದ ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿನಾಗೇಶ ಗಣೇಶ ಹೆಬ್ಬಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button