Important
Trending

ಆಟವಾಡುತ್ತಿದ್ದ ವೇಳೆ ಬಿಸಿಪಾತ್ರೆಯಲ್ಲಿ ಬಿದ್ದು ಮಗು ಸಾವು: ನಾಯಿಯೊಂದಿಗೆ ಆಟವಾಡುತ್ತಿದ್ದ ವೇಳೆ ದುರ್ಘಟನೆ

ಶಿರಸಿ: ಎರಡುವರೆ ವರ್ಷದ ಮಗುವೊಂದು ಮನೆಯ ಅಂಗಳದಲ್ಲಿ ಶ್ವಾನದೊಂದಿಗೆ ಆಟವಾಡುತ್ತಿದ್ದ ವೇಳೆ ದನಗಳಿಗೆ ನೀಡುವ ಅಕ್ಕಿಧೂಳಿನ ಬಿಸಿ ಪಾತ್ರೆಗೆ ಬಿದ್ದು ಮೃತಪಟ್ಟ ಘಟನೆ ಸೋಂದಾದಲ್ಲಿ ನಡೆದಿದೆ. ನರ್ಸಗಲ್ ಗ್ರಾಮದ ರೇಷ್ಮಾ ಮಂಜುನಾಥ ಮರಾಠಿ ಎಂಬ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಈಕೆ ನಾಯಿಯೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ದನಗಳ ಮೇವಿಗಾಗಿ ಕಾಯಿಸಿಟ್ಟಿದ್ದ ಪಾತ್ರೆಯಲ್ಲಿ ಬಿದ್ದಿದ್ದಾಳೆ.

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಜಿಲ್ಲಾಧಿಕಾರಿಗಳಿಂದ ಕುಮಟಾದಲ್ಲಿ ಮತ್ತೊಮ್ಮೆ ಸ್ಥಳ ಪರಿಶೀಲನೆ

ಬಿಸಿಪಾತ್ರೆಯಲ್ಲಿ ಬಿದ್ದ ಪರಿಣಾಮ ಮಗು ಸುಟ್ಟುಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದ್ದು, ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಮನೆಯಲ್ಲಿ ಸ್ಮಶಾನಮೌನ ಆವರಿಸಿದೆ.

ವಿಸ್ಮಯ ನ್ಯೂಸ್, ಶಿರಸಿ

land for sale

Back to top button