ಜಿಲ್ಲೆಯಲ್ಲಿ ಮತ್ತಿಬ್ಬರು ಕರೊನಾಗೆ ಬಲಿ

ಹೊನ್ನಾವರದಲ್ಲಿ 13 ಮಂದಿಗೆ ಕರೊನಾ?
ಹಡಿನಬಾಳ, ಕರ್ಕಿ, ಕಾನಕ್ಕಿ, ಹಳದೀಪುರದಲ್ಲಿ ಕೇಸ್ ದೃಢ
ಜಿಲ್ಲೆಯಲ್ಲಿ ಮತ್ತಿಬ್ಬರ ಬಲಿ ಪಡೆದ ಕರೊನಾ

[sliders_pack id=”2570″]

ಹೊನ್ನಾವರ: ಸೋಮವಾರ ಯಾವುದೇ ಪ್ರಕರಣ ಪತ್ತೆಯಾಗದೇ ಇದ್ದ ಹೊನ್ನಾವರದಲ್ಲಿ ಇಂದು 13 ಕರೊನಾ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. (©Copyright reserved by Vismaya tv) ಹಳದೀಪುರ 1, ಕರ್ಕಿಯ 32 ವರ್ಷದ ಮಹಿಳೆ, ಹಡಿನಾಬಾಳದಲ್ಲಿ ಎರಡು, ಕಾನಕ್ಕಿಯಲ್ಲಿ ಒಂದು, ಕೆಳಗಿನ ಪಾಳ್ಯದಲ್ಲಿ ಒಂದು, ಮಂಕಿಯಲ್ಲಿ ಒಂದು, ಪ್ರಭಾನನಗರ ಗಾಂಧಿನಗರದ ವಾರ್ಡ್ ವ್ಯಾಪ್ತಿಯಲ್ಲಿ ಆರು ಕೇಸ್ ದಾಖಲಾಗಿದೆ ಎಂಬ ಮಾಹಿತಿ ಬಂದಿದೆ.

ಶಿರಸಿಯಲ್ಲಿOದು 10ಕ್ಕಿಂತ ಅಧಿಕ ಕೇಸ್?
ಶಿರಸಿ: ತಾಲೂಕಿನಲ್ಲಿ ಕರೊನಾ ಆರ್ಭಟ ಜೋರಾಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮಂಗಳವಾರ 10ಕ್ಕಿಂತ ಅಧಿಕ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಗ್ರಾಮೀಣ ಭಾಗವಕ್ಕೂ ಸೋಂಕಿನ ನಂಜು ವ್ಯಾಪಿಸುತ್ತಿರುವುದು ಆತಂಕ ಮೂಡಿಸಿದೆ. ಬಿಸಲಕೊಪ್ಪ, ಮೆಣಸಿನಕಟ್ಟಾ ಭಾಗದಲ್ಲೂ ಇಂದು ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಸಂಜೆಯ ಹೆಲ್ತ್ ಬುಲೆಟಿನ್‌ನಲ್ಲಿ ಈ ಕುರಿತ ನಿಖರ ಅಂಕಿ-ಸoಖ್ಯೆ ಮಾಹಿತಿ ಅಧಿಕೃತಗೊಳ್ಳಲಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಸಂಜೆ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ.

ಭಟ್ಕಳದ ವೃದ್ಧೆ ಮತ್ತು ಶಿರಸಿಯ ವೃದ್ಧ ಸಾವು
ಕಾರವಾರ: ಕರೊನಾ‌ ಸೋಂಕಿನಿಂದ‌ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಇಬ್ಬರು ಇಂದು ಕಾರವಾರದ ಕರೊನಾ ವಾರ್ಡ್ ನಲ್ಲಿ ಸಾವನ್ನಪ್ಪಿದ್ದಾರೆ. ಭಟ್ಕಳದ ವೃದ್ಧೆ ಮತ್ತು ಶಿರಸಿಯ ವೃದ್ಧ ಕರೊನಾ‌ದಿಂದಾಗಿ ಕಾರವಾರದ ಕರೊನಾ ವರ‍್ಡಿಗೆ ದಾಖಲಾಗಿದ್ದರು. ಆದರೆ, ಈ ಇಬ್ಬರನ್ನೂ ಕರೊನಾ ಬಲಿ ಪಡೆದಿದೆ. ಈ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ‌.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Exit mobile version