ಯಕ್ಷಗಾನ ವೇಷಧರಿಸಿ ಗಮನಸೆಳೆದ ಆರೋಗ್ಯ ಸಚಿವರು!

ಭಟ್ಕಳ: ಯಕ್ಷಗಾನ ವೇಷ ತೊಟ್ಟ ಸಚಿವ ಡಾ. ಕೆ ಸುಧಾಕರ್ ಗಮನಸೆಳದರು. ಹೌದು, ಭಟ್ಕಳದಲ್ಲಿ ರಾತ್ರಿ ಯಕ್ಷಗಾನ ಪಾತ್ರದಾರಿಯಾದ ಸಚಿವರು, ಆಕರ್ಷಣೆಯ ಕೇಂದ್ರಬಿoದುವಾಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸರ್ಕಾರಿ ಆಸ್ಪತ್ರೆ ಭೇಟಿ ಹಾಗೂ ಪರಿಶೀಲನೆ ಹಿನ್ನೆಲೆಯಲ್ಲಿ ಭಟ್ಕಳಕ್ಕೆ ಆಗಮಿಸಿದ್ದ ಸುಧಾಕರ್, ತಡರಾತ್ರಿ ಯಕ್ಷಗಾನ ನೋಡಲು ಆಗಮಿಸಿದ್ದರು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಹಾಗೂ ಶಾಸಕ ಸುನೀಲ್ ನಾಯ್ಕ ಜೊತೆ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಸಚಿವರು ಯಕ್ಷಗಾನ ವೇಷ ತೊಟ್ಟು ಸಂತಸ ಪಟ್ಟದರು.

ವಿಸ್ಮಯ ನ್ಯೂಸ್, ಭಟ್ಕಳ

Exit mobile version