![accident](http://i0.wp.com/vismaya24x7.com/wp-content/uploads/2022/10/accident-4.jpg?fit=1280%2C720&ssl=1)
ಯಲ್ಲಾಪುರ: ರಾಜಹಂಸ ಬಸ್ ಮತ್ತು ಬೊಲೆರೋ ನಡುವೆ ಅಪಘಾತ ಸಂಭವಿಸಿದ ಘಟನೆ ತಾಲೂಕಿನ ಚವತ್ತಿಯ ಹತ್ತಿರ ಸಂಭವಿಸಿದೆ. ಬಸ್ ನಲ್ಲಿ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾರಿಗೂ ಕೂಡ ಗಂಭೀರ ಗಾಯಗಳಾಗಲಿಲ್ಲ ಎನ್ನಲಾಗಿದೆ. ಈ ರಾಜಹಂಸ ಬಸ್ ಮೈಸೂರಿನಿಂದ ಯಲ್ಲಾಪುರಕ್ಕೆ ಶಿರಸಿ-ಯಲ್ಲಾಪುರ ಮಾರ್ಗದಿಂದ ಬರುತ್ತಿರುವಾಗ ಅಪಘಾತ ಸಂಭವಿಸಿದೆ.
ಗಣನೀಯ ಪ್ರಮಾಣದಲ್ಲಿ ಏರಿಕೆಕಂಡ ಮೊಸಳೆಗಳ ಸಂಖ್ಯೆ: ಎಲ್ಲೆಂದರಲ್ಲಿ ಮೊಸಳೆಗಳ ಕಾಟ: ಸಾರ್ವಜನಿಕರು ಕಂಗಾಲು
ರಾಜಹಂಸ ಮತ್ತು ಬೊಲೆರೋ ಮುಖಾಮುಖಿ ಡಿಕ್ಕಿಯಾಗಿದೆ ಎನ್ನಲಾಗಿದೆ. ಬೆಳಿಗ್ಗೆ 8.20 ರ ಸುಮಾರಿಗೆ ಅಪಘಾತವಾಗಿದೆ ಎನ್ನಲಾಗಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಕಾವರಾರ
![](http://i0.wp.com/vismaya24x7.com/wp-content/uploads/2021/11/rooping.jpg?resize=708%2C398&ssl=1)