ಪತ್ನಿಯ ಮೃತದೇಹ ತರಲು ಹಣವಿಲ್ಲದೆ ಕಂಗಾಲಾಗಿದ್ದ ಪತಿ: ವಿಷಯ ತಿಳಿದ ಅಪ್ಪು ಅಭಿಮಾನಿಗಳು ಮಾಡಿದ್ದೇನು ನೋಡಿ?

ಮಾನವೀಯತೆ ಮೆರೆದ ಪುನೀತ್ ಅಭಿಮಾನಿಗಳು

ಶಿರಸಿ: ಚಿತ್ರಮಂದಿರದ ದಿನಗೂಲಿ ನೌಕರನ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಪತ್ನಿಯ ಮೃತದೇಹ ತರಲು ದುಡ್ಡಿಲ್ಲದೆ ಪತಿ ಕಂಗಾಲಾಗಿದ್ದ. ಏನು ಮಾಡಬೇಕೆಂದು ತೋಚದೆ ತಲೆಮೇಲೆ ಕೈಹೊತ್ತು ಕುಳಿತಿದ್ದ. ಇದೇ ವೇಳೆ, ಗಂಧದ ಗುಡಿ ಚಲನಚಿತ್ರ ವೀಕ್ಷಣೆಗಾಗಿ ಅಪ್ಪು ಅಭಿಮಾನಿಗಳು ಬಂದಿದ್ದು, ಈ ವಿಷಯವನ್ನು ಪುನೀತ್ ಅಭಿಮಾನಿಗಳಿಗೆ ತಳಿಸಿದ. ಹೌದು, ಇಲ್ಲಿನ ಚಿತ್ರಮಂದಿರದಲ್ಲಿ ದಿನಗೂಲಿ ನೌಕರನಾಗಿರುವ ವ್ಯಕ್ತಿಯ ಗರ್ಭಿಣಿ ಪತ್ನಿಯ ಮಗು ಜನಿಸುವ ಮೊದಲೇ ಕೊನೆಯುಸಿರೆಳೆದಿತ್ತು. ಮಗುವನ್ನು ಹೊರತೆಗೆದು ಮಹಿಳೆಗೆ ಚಿಕಿತ್ಸೆ ನೀಡುವಾಗ ಚಿಕಿತ್ಸೆ ಫಲಿಸದೆ ಮಹಿಳೆಯೂ ಮೃತಪಟ್ಟಿದ್ದಳು.

ತೀವ್ರ ಹೃದಯಾಘಾತ: ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು

ಆಸ್ಪತ್ರೆಯ ಬಿಲ್ 24 ಸಾವಿರ ಆಗಿದ್ದು, ಇದನ್ನು ಕಟ್ಟಿ ಪತ್ನಿಯ ಮೃತದೇಹ ಬಿಡಿಸಿಕೊಳ್ಳಲು ಹಣವಿಲ್ಲದೆ ಪರದಾಡಿದ್ದ ಪತಿ. ವಿಷಯ ತಿಳಿದ ಶಿರಸಿಯ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಸ್ಪತ್ರೆಗೆ ತೆರಳಿ ಹಣ ಸಂದಾಯ ಮಾಡಿ ಮೃತದೇಹ ಮನೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಂತೆ ಅವರ ಅಭಿಮಾನಿಗಳು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version