Big News
Trending

ಜಿಲ್ಲೆಯಲ್ಲಿಯೂ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ

  • ಹೇಗಿರಲಿದೆ ಗೊತ್ತಾ ಹೋಮ್‌ ಐಸೋಲೇಷನ್?
  • 85 ಮಂದಿ ಆಸ್ಪತ್ರೆ ಸೇರಿದ್ರೆ, 90 ಮಂದಿ ಗುಣಮುಖರಾಗಿ ಬಿಡುಗಡೆ
  • ಜಿಲ್ಲೆಯಲ್ಲಿಂದು ಇಬ್ಬರ ಸಾವು
[sliders_pack id=”2570″]

ಕಾರವಾರ: ಜಿಲ್ಲಾಡಳಿತದ‌ ಎಲ್ಲಾ ಮುನ್ನೆಚ್ಚರಿಕಾ‌ ಕ್ರಮಗಳ‌ ನಡುವೆಯೂ ಜಿಲ್ಲೆಯಲ್ಲಿ ಕರೊನಾ ಸಂಖ್ಯೆ ಗಗನಮುಖಿಯಾಗಿದೆ. ಆದರೆ ಆಶಾದಾಯಕ ಬೆಳವಣಿಗೆ ಅಂದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡಾ‌ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಭಾನುವಾರ 85 ಮಂದಿಗೆ ಕರೊನಾ‌ ಕಾಣಿಸಿಕೊಂಡರೆ, 90 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಮನೆಯಲ್ಲಿಯೇ‌ ಚಿಕಿತ್ಸೆ ಆರಂಭ:
ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕರೊನಾ ವಾರ್ಡಿನಲ್ಲಿ ಈವರೆಗೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ©Copyright reserved by Vismaya tv ಅವರವರ  ಆರೋಗ್ಯ ಸ್ಥಿತಿಯ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ದಾಖಲು ಮಾಡಲಾಗುತ್ತಿತ್ತು. ಆದರೆ, ಇದೀಗ ರೋಗ ಲಕ್ಷಣ ರಹಿತವಾಗಿರುವವರಿಗೆ ಹೋಮ್ ಐಸೋಲೇಶನ್(ಮನೆಯಲ್ಲಿಯೇ ಚಿಕಿತ್ಸೆ) ಪ್ರಾರಂಭಿಸಲಾಗಿದೆ.

ಹೇಗಿರಲಿದೆ ಹೋಮ್‌ ಐಸೋಲೇಷನ್:?
ನಿಗದಿತ ಸಮಯಕ್ಕೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪೊಲೀಸರು ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ತೆರಳುತ್ತಾರೆ.©Copyright reserved by Vismaya tv ಈಗ ಜಿಲ್ಲೆಯಲ್ಲಿ 85 ಮಂದಿ ಹೋಮ್ ಐಸೋಲೇಷನ್‍ಗೆ ಒಳಪಟ್ಟಿದ್ದು,‌ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

[sliders_pack id=”1487″]

ಇಂದು 85 ಕರೊನಾ ಪ್ರಕರಣ ದಾಖಲು:
ದಾಂಡೇಲಿ 23, ಕುಮಟಾ 13, ಕಾರವಾರ 13, ಅಂಕೋಲಾ 5, ಹೊನ್ನಾವರ 4, ಭಟ್ಕಳ 11, ಶಿರಸಿ 9, ಯಲ್ಲಾಪುರ 1, ಮುಂಡಗೋಡ 3, ಹಳಿಯಾಳದಲ್ಲಿ 3 ಕೇಸ್ ದೃಢಪಟ್ಟಿವೆ.

ಇಂದು 90 ಮಂದಿ ಆಸ್ಪತ್ರೆಯಿಂದ‌ ಬಿಡುಗಡೆ:
ಕುಮಟಾದಲ್ಲಿ 18, ಹೊನ್ನಾವರ 13 ಹಳಿಯಾಳದಲ್ಲಿ 44, , ಜೋಯ್ಡಾ 2 , ಸಿದ್ದಾಪುರ 4 , ಯಲ್ಲಾಪುರ 4, ಮುಂಡಗೋಡದಲ್ಲಿ‌ ಮೂವರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಹಳಿಯಾಳದಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button